Saturday, December 8, 2012

ತುಟಿ ಅಂಚಿನ ಮೌನ ಕವಿತೆ


ಇಳಿ ಸಂಜೆಯ ತಿಳಿ ಬೆಳಕಲಿ
ನಿನ್ನ ಕಣ್ಣ ಕಾಂತಿಯೇ ನನಗೆ ಸ್ಪೂರ್ತಿಯು
ಪ್ರಾಸ ಮರೆತ ಪದ ಪುಂಜದಲಿ
ನಿನ್ನ ತುಟಿ ಅಂಚಿನ ಮೌನವೇ ಕವಿತೆಯು

ಬದುಕಿಗಷ್ಟು ಬಣ್ಣ ಕನಸಿಗಿನ್ನೂ ಕಣ್ಣ
ಹುಡುಕುತಲಿ ಅಲೆಯುತಲಿರುವೆ
ಜಗವೆಲ್ಲ  ಬರಡಾಗಿ ನನ್ನೊಳಗೆ
ನೀನಿರೆ ಅನುದಿನ ಅಷ್ಟೇ ಸಾಕು

ನಿನಗಷ್ಟೆ ಬರೆದ ಸಾಲನು ನಿನ್ನ
ಕಿವಿ ಅಂಚೆಯಲಿ ಹಾಕುತಲಿರುವೆ
ಲೋಕವೆಲ್ಲ ಕಿವುಡಾಗಿ ನಿನಗೊಬ್ಬಳಿಗೆ
ಕೇಳಬೇಕಿದೆ ಮನದ ಈ ಮಾತು

ಕಾಮತ್ ಕುಂಬ್ಳೆ 

Wednesday, October 31, 2012

ಅ ಆ ಇ ಈ ಉ ಊ ....


ಮ್ಮ ದಿನ ರುಳಲಿ ದಿನದ 
ಗಮಕ್ಕೆ ರಲ್ಲಿ ಡೆಬಿಡದೆ 
ಕಾಂಗಿಯಾಗಿ ವತ್ತಕ್ಷರ 
ಒಂದೊಂದಾಗಿ ದಿಸಿದಳು 
ದಾರ್ಯದಿ ಅಂಗಳದಲಿ

ಕಂದನ ಖುಷಿಯಲಿ ಗಂಡನಿಗೂ ಳಿಗೆ ಳಿಸಿದಳು
ಚಿರಂತನ ಛಾಯೆಯಾಗಿ ಜೊತೆಯಲಿ ಝೇಂಕರಿಸಿದಳು 
ಟೀಕೆ ಟಿಪ್ಪಣಿಗೆ ಡೊಂಕಾಗದೇ, ಮರುಗವಾದೆ
ವರು, ಳುಕು, ದ್ರವ್ಯಗಳ ಧಿಕ್ಕರಿಸಿದೆ ನಿನಗಾಗಿ 
ಪ್ರಗತಿಯಲಿ ಲವ ಯಸದೆ ವಿಷ್ಯವಾದೆ ಗನಿಗೆ 

ಯಾವನಿಗಾಗಿ ಕ್ತವ ವಲವಿಕೆಯಲಿ ವ್ಯಯಿಸಿದೆಯೋ
ಹರದಿ ಷೋಕಿ ರಸದಲಿರಲವನು 
ತಾಶ ಳಾಗದೆ ಕ್ಷೆಮಾಭಿಲಾಷೆಯಲೇ 
ತ್ರಿಕಾಲ ಜ್ನಾಪಿಸುತಲಿಇರುವಳಿವಳು.
  

ಕಾಮತ್ ಕುಂಬ್ಳೆ 
೩೧/೧೦/೨೦೧೨ 

Thursday, October 18, 2012

ಅಲೆಮಾರಿ ಜೀವಕೆ ಆಸರೆಯ ನೀಡಿದೆ

ಮನಸ್ಸಿನ ಕಿಟಕಿಯ ಬಾಗಿಲನು ತೆರೆಯುತ
ತೆರೆಮರೆಯಲಿ ಮರೆಯಾಗಿ ಇಣುಕುತಲಿರುವೆ
ಕನಸಿನ ಪುಟಗಳ ಸಾಲಗಳ ಕೊರೆಯುತ
ನನ್ನೆದೆಯಲಿ ಮೆದುವಾಗಿ ಕುಟುಕುತಲಿರುವೆ
ಅಲೆಮಾರಿ ಜೀವಕೆ ಆಸರೆಯ ನೀಡಿದೆ ||
ವ್ಯಭಿಚಾರಿ ಭಾವಕೆ ನೀ ಸೆರೆಯ ನೀಡಿದೆ ||

ಆಪ್ಯಾಯಮಾನ ಯಾತನೆಯ ನೆಮ್ಮದಿಯ   
ತೆರೆದಿಟ್ಟು ಮುಳುಗಿದ ಏಕಾಂತಕೆ ಉಸಿರು ನೀಡಿದೆ
ದೇದೀಪ್ಯಮಾನ ಯೋಜನೆಯ ಮುನ್ನುಡಿಯ
ಬರೆದಿಟ್ಟು ಬಳಲಿದ ಲೇಖನಿಗೆ ಹುರುಪು ನೀಡಿದೆ ||ಅಲೆಮಾರಿ ಜೀವಕೆ ||

ಮನದ ಮುಗಿಲಲಿ ಭಾವನೆಯ ಗಾಳಿಪಟವ 
ಹಾರಿಬಿಟ್ಟು ಹರಿದ ದಾರಕೆ ಚೇತನವ ನೀಡಿದೆ
ಕನಸ ಮಗ್ಗುಲಲಿ ಅಪ್ರಮೇಯ ಕನವರಿಕೆಯ
ಬಚ್ಚಿಟ್ಟು ಕಳೆದ ಗಳಿಗೆಗೆ ಸಾಂತ್ವನವ  ನೀಡಿದೆ ||ಅಲೆಮಾರಿ ಜೀವಕೆ ||

ನಿಮ್ಮ
ಕಾಮತ್ ಕುಂಬ್ಳೆ

Sunday, August 19, 2012

ದುಬಾರೆ; ಅಲೆಯ ಮೇಲೆ ನಾನು ತೇಲಿ ಹೋದಾಗ


ದುಬಾರೆ; ಅಲೆಯ ಮೇಲೆ ನಾನು ತೇಲಿ ಹೋದಾಗ



ಪ್ರತಿ ಬೆಳಗ್ಗೆ ೯ಕ್ಕೆ ಶುರುವಾಗುವ ಚೈತ್ರಯಾತ್ರೆಯಲ್ಲಿ ನಾವು ಹಣ ಸಂಪಾದಿಸಿದ್ದೆವೋ ಇಲ್ಲವು ಎನ್ನುವುದು ಸೆಕೆಂಡರಿ ಆದರೆ ರಾತ್ರಿ ಮತ್ತೆ ಮನೆ ತಲುಪಿದಾಗ ನಮ್ಮ ಮೂಗಿನ ಹೊಳ್ಳೆಗಳಲ್ಲಿ ಕೋಟಿ ಕಾರ್ಬನ್ ಕಣಗಳು ಸಂಪಾದನೆಯಂತೂ ಖಂಡಿತವಾಗಿ ಆಗಿರುತ್ತದೆ. ಜಂಜಾಟದ ನಗರ ಜೀವನ, ಎಂದೂ ನಾರ್ಮಲ್ ಗಿಂತ ಮೇಲೆ ಇಲ್ಲ ಕೆಳಕ್ಕೆ ಇರುವ ರಕ್ತದೊತ್ತಡ ವನ್ನು ಮತ್ತೆ ನಾರ್ಮಲ್ ಗೆ ತರಲು, ಶಾಶ್ವತವಾಗಿ ಅಲ್ಲದಿದ್ದರೂ ಒಂದು ವಾರಾಂತ್ಯದ ಮಟ್ಟಿಗೆ ಮುಕ್ತಿ ಬಯಸುತ್ತೇವೆ.

ಮುಂಗಾರು ಮಳೆ ಬೀಳುತಿದ್ದಂತೆ ಅಣಬೆ, ಜೀರುಂಡೆಗಳು ಜೀವತಳೆಯುತ್ತದೆ ಅದರ ಜೊತೆಗೆ ಜೀವ ತಳೆಯುವ ಇನ್ನೊಂದು ನಿರ್ಜೀವ ಸಂಗತಿ ಎಂದರೆ ಪ್ರಕೃತಿ ಚಾರಣದ ಹುಚ್ಚು. ಮುಂಗಾರುಮಳೆ ಪ್ರತಿ ಹನಿಯ ಅಮಲನ್ನು ಅನುಭವಿಸಬೇಕು ಎಂದಾದಾಗ ನೆನಪಾಗುವ ಮೊದಲ ಸ್ಥಳ ಮಡಿಕೇರಿ. ಈಗಿನ ಜನರ ಬಾಯಲ್ಲಿ ಶಾರ್ಟ್ ಅಂಡ್ ಸ್ವೀಟ್ ಆಗಿ ಕೂರ್ಗ್ ಎಂದು ಕರೆಸಿಕೊಳ್ಳುವ ಕೊಡಗು ಒಂದು ವಿಶಿಷ್ಟವಾದ ಸಂಸ್ಕೃತಿಯನ್ನು ತನ್ನಲ್ಲಿ ಹುದುಗಿಸಿ ಇಟ್ಟುಕ್ಕೊಂಡಿದೆ.ಹಳೆಯ ಆಚಾರ ಗಳೊಂದಿಗೆ ಹೊಸ ವಿಚಾರಗಳೂ ಇಲ್ಲಿ ಸಮ್ಮೇಳಿಸಿವೆ. ತಲೆಮಾರುಗಳಿಂದ ಸಾಗಿ ಬರುತ್ತಿರುವ ಎಸ್ಟೇಟ್ ಗಳಲ್ಲಿ ಈಚೆಗೆ ಹೋಂ-ಸ್ಟೆಯ್ಸ್ ಬೋರ್ಡ್ ಗಳು ನೇತಾಡುತ್ತಿವೆ; ಇಂತಹ ಬೋರ್ಡ್ ಗಳು ಹೊಸದಾಗಿದ್ದರೂ ಅಲ್ಲಿ ಸಿಗುವ ಸಾತ್ಕಾರ, ಸಂಭ್ರಮಗಳು ಹಿಂದಿನ ದಿನಗಳನ್ನು ನೆನಪಿಸಿತ್ತವೆ. ಕೆಲವೊಮ್ಮೆ ಇವ್ವು ನಾವು ಕೊಡುವ ದುಬಾರಿ ಬಾಡಿಗೆಗೆ ಸಂದ ಪುರಷ್ಕಾರ ಎಂದು ಅನಿಸುತ್ತದ್ದಾದರೂ ಪ್ರವಾಸ ಮುಗಿಸಿ ಹಿಂತಿರುಗುವಾಗ ಎಲ್ಲರ ಮುಗದಲ್ಲಿ ಬರುವ ಮಳೆಗಾಲದಲ್ಲಿ ಮರಳಿ ಇಲ್ಲಿಗೆ ಬರುವ ಮಾತಿರುತ್ತದೆ.

ಇಲ್ಲಿ ವರೆಗೆ ಡಿಸ್ಕವರಿ, ಎನ್.ಜಿ.ಸಿ ಗಳಲ್ಲಿ ನೋಡಿದ ರಿವರ್ ರಾಫ್ಟಿಂಗ್ ನಮ್ಮ ಕರ್ನಾಟಕದಲ್ಲಿ ಇದೆ ಎಂದು ಕೇಳಿದಾಗ ಅದನ್ನು ಮಾಡುವ ಮನಸ್ಸಾಯಿತು. ಈಜು ಬಾರದಿದ್ದರೂ ಆಲೆಯ ಮೇಲೆ ತೇಲುವ ಮನಸ್ಸಾಯಿತು!!

ರಿವರ್ ರಾಫ್ಟಿಂಗ್ ಅಂದ್ರೆ ...?
ನದಿಯು ನೈಸರ್ಗಿಗವಾಗಿ ಕಾಡುಮೇಡುಗಳ ನಡುವೆ ದಾರಿ ಮಾಡಿಕೊಂಡು ಹರಿಯುತ್ತಿರುತ್ತದೆ. ದಾರಿಗಳು ಕೆಲವೆಡೆ ತುಂಬಾ ಅಗಲವೂ ಕೆಲವೆಡೆಗಳಲ್ಲಿ ತುಂಬಾ ಕಿರಿದಾಗಿಯೂ ಇರುತ್ತದೆ, ಇವುಗಳ ನಡುವೆ ಬಂಡೆಗಳು ಕಲ್ಲುಗಳನ್ನು  ಕೊರೆದು ದಾರಿ ಮಾಡಿರುತ್ತವೆ, ಕೆಲವೊಂದು ಕಡೆಗಳಲ್ಲಿ ಬಂಡೆಗಳು, ಕಂದಕಗಳೂ ನಿರ್ಮಾಣ ವಾಗಿರುತ್ತವೆ. ರೀತಿಯ ಸಮತಟ್ಟು ಅಲ್ಲದ ಪ್ರದೇಶದಲ್ಲಿ ದೋಣಿ ಗಳು ಹಾದು ಹೋಗುವಾಗ ಅದು ನಾವಿಕನ ನಿರ್ದೇಶನಕ್ಕೆ ಬದಲಾಗಿ ನೀರಿನ ಸೆಳೆತಕ್ಕೆ ಅನುಗುಣವಾಗಿ ಸಾಗಲು ಶುರುಮಾಡುತ್ತದೆ ಹಿಡಿತ ತಪ್ಪಿದ ದೋಣಿಯನ್ನು ಮತ್ತೆ ಹಿಡಿತಕ್ಕೆ ತರುವುದು ಒಂದು ರೋಮಾಂಚಕ ಅನುಭವ.

ಎಲ್ಲಿ ..?
ಮಡಿಕೇರಿಯಿಂದ ಕುಶಾಲನಗರಕ್ಕೆ ಸಾಗುವ ದಾರಿಯಲ್ಲಿ ಕುಶಾಲ್ ನಗರ ತಲುಪುವ ಮೊದಲೇ ದುಬಾರೆ ಆನೆ ಉಧ್ಯಾನ ಗ್ಗೆ ಹೋಗುವ ತಿರುವು ಸಿಗುತ್ತದೆ. ಅಲ್ಲಿಂದ ಕೆಲವೇ ಮೈಲಿನಂತರದಲ್ಲಿ ಕಾವೇರಿ ತಟದಲ್ಲಿ ಹಲವಾರು ರಿವೆರ್ ರಾಫ್ಟಿಂಗ್ ಕ್ಯಾಂಪ್ ನವರನ್ನು ನೀವು ಕಾಣಬಹುದು.

ಪೂರ್ವ ತಯಾರಿ ..?
ಆಭರಣಗಳು, ಮೊಬೈಲ್ ಮತ್ತಿತರ ವಸ್ತುಗಳನ್ನು ಬೋಟ್ ಏರುವ ಮೊದಲೇ ತೆಗೆದಿಡಿ. ರಾಫ್ಟಿಂಗ್ ಕ್ಯಾಂಪ್ ನವರು ಕೊಟ್ಟ ಲೈಫ್ ಜಾಕೆಟ್, ಹೆಲ್ಮೆಟ್ ಅನ್ನು ಅವರ ಮೇಲ್ವಿಚಾರಣೆಯಲ್ಲಿ ಧರಿಸಿ. ರೋಮಾಂಚಕ ರೈಡ್ ಅನ್ನು ಚಿತ್ರೀಕರಿಸಲು ಬಯಸುವುದಾದರೆ ಕೆಮರಾ ಇಟ್ಟುಕೊಳ್ಳಿ, ಬಗ್ಗೆ ಮೊದಲೇ ನಿಮ್ಮ ಬೋಟ್ ಮೇಲ್ವಿಚಾರಕರಿಗೆ ಹೇಳಿ, ಅವರು ರಾಫ್ಟ್ ಸಮೀಪಿಸುತಿದ್ದಂತೆ ನಿಮ್ಮ ಕೆಮಾರದ ಸುರಕ್ಷತೆ ಬಗ್ಗೆ ನೋಡಿಕೊಳ್ಳುತ್ತಾರೆ.

ರಾಫ್ಟಿಂಗ್ ಪ್ಯಾಕೇಜ್ ನಲ್ಲೆ ಏನೇನು ಬರುತ್ತದೆ ..?
ಒಂದು ಲೈಫ್ ಜಾಕೆಟ್, ಹೆಲ್ಮೆಟ್ ಮತ್ತು ಒಂದು ಹುಟ್ಟು. , , ಮಂದಿಗೆ ಒಂದರಂತೆ ಟ್ಯೂಬ್ ಬೋಟ್, ಪ್ರತಿಯೊಂದು ಬೋಟ್ ಗೆ ಒಬ್ಬ ಗೈಡ್, ಪ್ರತಿಯೊಂದು ಬೋಟ್ ಗೆ ಒಂದು ವಾಟರ್ ರೇಸಿಸ್ಟೆಂಟ್ ಬ್ಯಾಗ್ (ನಿಮ್ಮ ಮೊಬೈಲ್, ಕೆಮೆರ ಇಡಲು

ಒಟ್ಟು ಎಷ್ಟು ರಾಫ್ಟ್ ಗಳಿರುತ್ತವೆ...?
ಮೂರರಿಂದ ಐದು ನೀರಿನ ಒಳಹರಿವಿನ ಮೇಲೆ ಅವಲಂಬಿಸಿರುತ್ತದೆ.

ರಾಫ್ಟ್ ಯಾರೆಲ್ಲ ಮಾಡಬಹುದು ..?
ಹದಿನೈದರಿಂದ ಅರುವತ್ತು ವಯಸ್ಸಿನ ನಡುವಿನ ಎಲ್ಲರೂ ಮಾಡಬಹುದು.ಈಜಲು ಬರುವವರೂ ಬಾರದವರೂ , ನೀರಿನ ಭಯ ಇರುವವರೂ ನಿರ್ಭೀತರಾಗಿ ಮಾಡಬಹುದು.

ಒಟ್ಟು ಉದ್ದ ..?
ಕಿ.ಮಿ

ರಾಫ್ಟ್ ತೆಗೆದುಕೊಳ್ಳುವ ಸಮಯ ..?
ಘಂಟೆ ಇಂದ ಘಂಟೆ, ಇದು ನೀರಿನ ಹರಿವು ಮತ್ತು ಬೋಟ್ ಚಲಾಯಿಸುತ್ತಿರುವವರ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ.

ರಾಫ್ಟಿಂಗ್ ಗೆ ಪ್ರಶಕ್ತ ಸಮಯ...?
ಜೂನ್ ನಿಂದ ಆಗಸ್ಟ್

ನೀವು ರಾಫ್ಟ್ ಮಾಡುವ ಮುಂಚೆ ಕೆಲವೊಂದು ಸಲಹೆಗಳು:
ಇಲ್ಲ ಮಂದಿಯ ಪಯಣ ಹೆಚ್ಚು ಮುದ ಕೊಡುತ್ತದೆ.
ನಿಮ್ಮ ಬೋಟ್ ನಲ್ಲಿ ಎಲ್ಲ ನಿಮ್ಮ ವಯೋಮಿತಿ ಮತ್ತು ಮನಸ್ತಿತಿಯವರೇ ಇರುವಂತೆ ಮುತುವರ್ಜಿ ವಹಿಸಿ ಇದು ನಿಮಗೆ ಇನ್ನಷ್ಟು ಥ್ರಿಲ್ ಒದಗಿಸುತ್ತದೆ.
ನಿಮ್ಮ ಜೊತೆಯಲ್ಲಿ ಬರುವ ಗೈಡ್ ಮಾರ್ಗದರ್ಶನದಂತೆ ಹುಟ್ಟನ್ನು ಚಲಾಯಿಸಿ.
ಕೆಲವೊಂದು ಸಲ ದೋಣಿ ಮುಳುಗುವ ಸಂಭವವಿರುತ್ತದೆ. ನಿರ್ಭೀತರಾಗಿ ನೀರಲ್ಲಿ ಮುಳುಗಿ. ಲೈಫ್ ಜಾಕೆಟ್ ನಿಮ್ಮನ್ನು ಮೇಲೆ ತಳ್ಳುತ್ತದೆ.
ನೀವು ಎಷ್ಟು ಥ್ರಿಲ್ಲಿಂಗ್ ಆಗಿ ಇರ್ತೀರಿ ಅಷ್ಟು ಥ್ರಿಲ್ಸ್  ನಿಮ್ಮ ಗೈಡ್ ನಿಮಗೆ ಕೊಡುತ್ತಾನೆ, ಆದ್ದರಿಂದ ಭಯ ಮುಜುಗರ ಬಿಟ್ಟು ರೈಡ್ ಅನ್ನು ಸಂಪೂರ್ಣವಾಗಿ ಆಸ್ವಾದಿಸಿ.
ರಾಫ್ಟ್ ಮುಗಿದ ಬಳಿಕ ನಿಮ್ಮನ್ನು ಮೊದಲ ಸ್ಥಳಕ್ಕೆ ಜೀಪಿನಲ್ಲಿ ತಂದು ಬಿಡುತ್ತಾರೆ.

ಬಾರಿ ಹೊಸತನ್ನೆನನ್ನೋ ಸಾಧಿಸುವ ಛಲದಿಂದಲೇ ನಾವು ನಮ್ಮ ಬ್ಯಾಗ್ ಅನ್ನು ಕಟ್ಟಿಕೊಂಡಿದ್ದೆವು. ಮಡಿಕೇರಿಯಲ್ಲಿ ಹೊಸತೇನಿದೆ..? ಕಣ್ಣು ಬಿಟ್ಟರೆ ಕಾಣುವುದು ದೂರ ದೂರಕ್ಕೆ ಹಬ್ಬಿರುವ ಮಂಜು, ಮಂಜು ಮಾಯವಾದರೆ ಅಲ್ಲಿ ಕಾಣುವ ಕಾಫಿ ಎಸ್ಟೇಟ್ ಗಳು, ಕೆಲವೊಂದು ಜಲಪಾತಗಳು, ಟಿಬೀಟಿಯನ್ನರ ಪುನರ್ವಸತಿ ಕೇಂದ್ರ, ಮತ್ತು ಎಲ್ಲದರ ನಡುವೆ ಹುಟ್ಟಿ ತನ್ನಪಾಡಿಗೆ ಹರಿವ ಕಾವೇರಿ. ಇವಲ್ಲಿ ಹೊಸತನ ಏನಿದೆ ಅಂದುಕೊಂಡಿದ್ದೆ. ಆದರೆ ಪ್ರವಾಸ ಮುಗಿದಾಗ ಎಲ್ಲವು ಹೊಸತಾಗಿತ್ತು. ನೀವೂ ಹೋಗಿ ಬನ್ನಿ ಹೊಸ ಅನುಭವದೊಂದಿಗೆ ಹೊಸ ಅನುಭೂತಿಯೊಂದಿಗೆ ಮತ್ತೆ ಕೆಲಸದಲ್ಲಿ ನಿಮ್ಮ ದೈನಂದಿನ ಕಾರ್ಯದಲ್ಲಿ ತೊಡಗಲು ನೆರವಾಗುವುದು.

ನಿಮ್ಮ
ಕಾಮತ್ ಕುಂಬ್ಳೆ
ಚೂರು ಈ ಲೇಖನ ನಿನ್ನೆಯ ಕನ್ನಡಪ್ರಭದ ಪ್ರವಾಸಪ್ರಭ ವಿಭಾಗದಲ್ಲಿ ಪ್ರಕಟ ಗೊಂಡಿದೆ. ಓದಲು ಸಂಚಿಕೆಯ ೧೭ ನೇ ಪುಟಕ್ಕೆ ಕ್ಲಿಕ್ಕಿಸಿ.  Kannada prabha