Monday, August 15, 2011

ಕಿಚ್ಚು :: ಹೊತ್ತಿ ಉರಿದ ಮೇಲಿನ ಆಶಾಕಿರಣ ...(ಕೊನೆಯ ಭಾಗ)




೨೪


ಯಾವುದೇ ಚಿಂತೆ ಇರದ ಮಡದಿ ಮತ್ತು ೩ ವರುಷದ ಒಂದು ಮಗುವಿನೊಂದಿಗೆ ಸುಖದ ಜೀವನ ನಡೆಸುತ್ತಿದ್ದೆ. ಸ್ವರ್ಗವೇ ನಮ್ಮ ಮನೆಯಲ್ಲಿ ನಲಿಯುತ್ತಿತ್ತು.ಹೀಗಿರಲು ಒಂದು ದಿನ ನನ್ನ ರಮ್ಯ ಕಡಲಿನಲ್ಲಿ ಬ್ರಹತ್ ಅಲೆಯೇ ಅಪ್ಪಳಿಸಿತು. ಒಂದೇ ವೇಗದಲ್ಲಿ ಸಾಗುತ್ತಿದ್ದಪುಟ್ಟ ಬಾಳನೌಕೆ ಸುಂಟರಗಾಳಿಗೆ ಸಿಕ್ಕಿ ತತ್ತರಿಸಿ ಹೋಯಿತು.


ಜೀವಾವದಿ ಶಿಕ್ಷೆಗೆ ಒಳಗಾಗಿದ್ದ ನನ್ನ ಅಮ್ಮ ಜೀವನದಲ್ಲಿ ನೊಂದು ತನ್ನ ಬಂಧಿಕೋಣೆಯಲ್ಲೇ ಕೊನೆ ಉಸಿರು ಎಳೆದರು ಎಂಬ ವಾರ್ತೆಯನ್ನು ಗಣೇಶಣ್ಣ ಫೋನ್ ಮಾಡಿ ತಿಳಿಸಿದ್ದರು.ಇಲ್ಲಿವರೆಗೆ ನನ್ನ ಪೂರ್ವಾಪರ ತಿಳಿದಿರದ ನನ್ನ ಪತ್ನಿ ಸ್ವರ್ಣಲತಾಳಿಗೆ ಈಗ ನನ್ನ ಹಿನ್ನಲೆ ತಿಳಿಸುವುದು ಅನಿವಾರ್ಯವಾಗಿತ್ತು.

ಊರಿನಲ್ಲಿ ಸೂರಿರದೆ ನಾನು ರಾಮುನೊಂದಿಗೆ ಅವನ ಕೋಣೆಯಲ್ಲೇ ೨ ವಾರ ಕಳೆದೆ. ವಸುಗಾಗಿ ಆ ಎರಡು ವಾರದಲ್ಲಿ ಹುಡುಕದ ಸ್ಥಳವಿರಲಿಲ್ಲಆದರೆ ಅವಳು ನನಗೆ ಸಿಗಲೇ ಇಲ್ಲ. ಅದೇ ಸಮಯದಲ್ಲಿ ನಾನು ಹುಟ್ಟಿ ಬೆಳೆದ ಮನೆಗೆ ಒಂದು ಬಾರಿ ಭೇಟಿ ನೀಡಿ ಅವರ ದಿನಚರಿಯನ್ನು ದೂರದಿಂದಲೇ ನೋಡಿದೆವಸಂತನು ೫  ನೇ ತರಗತಿಯಲ್ಲಿ ಓದುತ್ತಿದ್ದನುನನ್ನ ಹಿರಿ ತಂಗಿ ಧನು ೬ ಕ್ಕೆ ಶಾಲೆ ನಿಲ್ಲಿಸಿ ಅಕ್ಕ ಪಕ್ಕದವರ ಮನೆಗೆಲಸಕ್ಕೆ ಹೋಗಿ ಉಳಿದ ೭ ಮಂದಿಯ ಹೊಟ್ಟೆಯ ಭಾರ ಹೊತ್ತಿದ್ದಳುನಾನು ಅವಳ ಮುಂದೆ ಹೋದಾಗ ನನ್ನ ಸಂಭಂದವನ್ನೇ ನಿರಾಕರಿಸಿದಳು.ನನ್ನೆವರೆಂದು ಇದ್ದ ಎಲ್ಲರೂ ನನ್ನಿಂದ ದೂರವಾದ ಮೇಲೆ ಊರಿನಲ್ಲಿ ಇರಲು ಮನಸಿರಲಿಲ್ಲಉರು ಬಿಟ್ಟು ಮತ್ತೆ ಮುಂಬೈ ಸೇರಿದೆ.

ರಾಮರಾಯರ ಮೇಲೆ ಅಂದು ಅವರು ನನಗೆ ಊರಿಗೆ ಹೋಗಲು ಬಿಡದ ಕಾರಣ ಇಲ್ಲದ ಧ್ವೆಶವಿತ್ತುಅದೇ ಕಾರಣಕ್ಕಾಗಿ ಅವರ ಹೋಟೆಲಿನ ಕೆಲಸ ಬಿಟ್ಟಿದ್ದೆ. ಮುಂಬೈನ ಜೀವನಕ್ಕೆ ಹೊಂದಿಕೊಂಡಿದ್ದ ನನಗೆ ಹೊಸ ಕೆಲಸ ಹುಡುಕುವುದು ಕಷ್ಟವಾಗಲಿಲ್ಲಅವರ ಬೆಂಗಳೂರಿನ ಪ್ರತಿಸ್ಪರ್ಧಿ ಪ್ರಭಾತ್ ಹೋಟೆಲ್ ನವರು ಆಗತಾನೆ ಮುಂಬೈನಲ್ಲಿ ಹೊಸ ಹೋಟೆಲ್ ಶುರು ಮಾಡಿರುವ ವಿಚಾರ ತಿಳಿಯಿತು. ಪ್ರಭಾತ್ ಹೋಟೆಲ್ ನ ಮಾಲೀಕ ಪ್ರಭಾಕರ್ ರಾಮರಾಯರ ದಾಯಾದಿ. ಅವರ ಹೋಟೆಲ್ ನಲ್ಲಿ ಕೆಲಸ ಗಿಟ್ಟಿಸಿಕ್ಕೊಂಡೆ.

ಅರ್ಥವಿರದ ಸಂಪಾದನೆ ನನ್ನದಾಗಿತ್ತು,ಎಲ್ಲಾ ಖರ್ಚು ಹೋಟೆಲ್ನಲ್ಲಿ ಸಾಗುತಿತ್ತು. ಹಣದ ಮೋಹ ಕಮ್ಮಿ ಯಾಗಿತ್ತುಸಂಪಾದಿಸಿದ ಹಣ ಮನೆಯವರು ಸ್ವೀಕರಿಸಲು ಒಲ್ಲೆ ಅಂದ ಮೇಲೆ ಯಾರಿಗಾಗಿ ಸಂಪಾದಿಸಲಿ ಎಂಬ ಭಾವವು ಹುಟ್ಟಿತು,ಅದೇ ಸಮಯದಲ್ಲಿ ಮುಂಬೈನ ಒಂದು ಅನಾಥಾಶ್ರಮದ ಸಂಪರ್ಕ ಬೆಳೆಯಿತು. ನನ್ನ ಸಂಪಾದನೆಯನ್ನು ಆ ಅನಾಥರ ಬಾಳಿಗೆ ಕೊಡಲು ಶುರು ಮಾಡಿಕ್ಕೊಂಡೆ.

ಆ ಅನಾಥಾಶ್ರಮದಲ್ಲಿ ಅದೆಷ್ಟೋ ನತದೃಷ್ಟರಿದ್ದರುಅಂಥವರಲ್ಲಿ ಸ್ವರ್ಣಲತಾ ಒಬ್ಬಳು. ಕನ್ನಡದ ಹುಡುಗಿ. ಅವಳೂ ಹುಚ್ಚು ಪ್ರೀತಿಯ ಮಾಯಾ ಬಲೆಗೆ ಸಿಕ್ಕಿ ಮುಂಬೈ ಸೇರಿದವಳು. ಪ್ರೀತಿಯ ನಾಟಕ ಆಡಿ ಯಾವನೋ ಮಹಾನುಭಾವ ಅವಳನ್ನು ದೇಹಮಾರಾಟದ ಧಂದೆಗೆ ಮಾರಿದ್ದಅಲ್ಲಿಂದ ಹೇಗೋ ತಪ್ಪಿಸಿಕ್ಕೊಂಡು ಬಂದ ಆ ಹುಡುಗಿ ಈ ಆಶ್ರಮ ಸೇರಿದ್ದಳು. ಎಲ್ಲಾ ಅನಾಥರಲ್ಲಿ ತೋರಿಸುತ್ತಿದ್ದ ಪ್ರೀತಿಯನ್ನು ಅವಳಲ್ಲಿಯೂ ತೋರಿಸಿದ್ದೆ ಆದರೆ ದಿನ ಕಳೆದಂತೆ ಒಬ್ಬೊರಿಗೊಬ್ಬರು ಅನ್ಯೋನ್ಯರಾಗುತ್ತ ಹೋದೆವುಜವಾಬ್ಧಾರಿ ಹೊತ್ತ ಪ್ರಭುದ್ದ ಮನಸ್ಸು ಪ್ರಭುದ್ದ ಪ್ರೀತಿ,ಅದರ ಗಾಂಭೀರ್ಯಮತ್ತು ಅಘಾದತೆ ಅರ್ಥ ಮಾಡಿಕ್ಕೊಂಡಿತ್ತು.

ವಸುಂದರ ಮತ್ತು ನನ್ನಲ್ಲಿನ ಹದಿಹರೆಯದ ಹುಚ್ಚು ಪ್ರೀತಿ ಅದಾಗಿರಲಿಲ್ಲಒಬ್ಬರನ್ನೊಬ್ಬರು ಅಗಲಿ ಇರಲಾರದ ಪ್ರೌಡ ಪ್ರೀತಿ ಅದಾಗಿತ್ತು. ಇಲ್ಲಿ ನಮ್ಮ ಪ್ರೀತಿಗೆ ಶತ್ರುಗಳ ಕಾಟವು ಇರಲಿಲ್ಲ.
ಮುಂದಿನ ೨ ವರ್ಷದಲ್ಲಿ ಒಬ್ಬರನ್ನೊಬ್ಬರು ಅರಿತುಕೊಂಡಾದ ಬಳಿಕ ಮದುವೆ ಆಗುವ ನಿರ್ಧಾರಕ್ಕೆ ಬಂದೆವುಅನಾಥಾಶ್ರಮದವರ ಮಧ್ಯಸ್ತಿಕೆಯಲ್ಲಿ ಮದುವೆಯೂ ಆಯಿತು.

ಸುಖಸಂಸಾರವನ್ನು ಶುರುಮಾಡಿದೆವು.ಪುಟ್ಟ ಜೀವನ್ ನ ಆಗಮನವೂ ಆಯಿತು,ಇವೆಲ್ಲದರ ನಡುವೆ ನನ್ನ ಹಿಂದಿನ ದಿನಗಳು ಮೆಲ್ಲನೇ ಮರೆಯಾದವು.



ಇಲ್ಲಿವರೆಗೆ ನನ್ನ ಹಿನ್ನಲೆಯನ್ನು ನಾನು ಅವಳಲ್ಲಿ ಹೇಳಿರಲಿಲ್ಲ ಆದರೆ ಇವತ್ತು ಬಂದ ಗಣೇಶಣ್ಣನ ಕರೆ ಸ್ವರ್ಣಲತಾಳಿಗೆ ನನ್ನ ಪೂರ್ವಾಪರ ಹೇಳಲೇ ಬೇಕಾಯಿತುಅವಳಲ್ಲಿ ನನ್ನ ಹದಿಹರೆಯದಲ್ಲಿ ನಡೆದ ಎಲ್ಲಾ ಕಥೆನನ್ನ ವಸುಂದರನ ಪ್ರೀತಿಮನೆಯವರ ವಿರೋಧಇದೇ ವಿಚಾರಕ್ಕಾಗಿ ನಡೆದ ಅಪ್ಪನ ಕೊಲೆ ಅಮ್ಮನ ಸೆರೆವಾಸಮುಂಬೈ ಜೀವನವಸುಂದರನ ಅಗಲಿಕೆಅವಳ ಹೆತ್ತವರ ಅವಸಾನ ಎಲ್ಲವನ್ನು ಹೇಳಿದೆ.

ಸ್ವರ್ಣಲತಾಳ ಪಾಲಿಗೆ ಈಗ ನಾನುಅವಳನ್ನು ೮ ವರ್ಷ ಹಿಂದೆ ಮೋಸಮಾಡಿದ ಆ ಮಹಾನುಭಾವ ಇಬ್ಬರೂ ಒಬ್ಬರಂತೆ ಕಂಡೆವು ,ನನ್ನಲ್ಲಿ  ಅವಿತಿದ್ದ ರಾಕ್ಷಸ ಅವಳ ಕಣ್ಣಿಗೆ ಬಿದ್ದ ರಾಕ್ಷಸ ಮತ್ತೆ ನಮ್ಮ ಸುಖಸಂಸಾರದ ಬಾಳನೌಕೆಯನ್ನು ಮುಳುಗಿಸಿ ಬಿಟ್ಟ. ೫ ವರುಷದ ಗಂಡ ಹೆಂಡತಿ ಎಂಬ ಮತ್ತೊಂದುಕ್ಕೊಂಡಿ ನನ್ನ ಜೀವನ ಸರಪಳಿಯಿಂದ ಕಳಚಿಕ್ಕೊಂಡಿತು೩ ವರುಷದ ಜೀವನ್ ನೊಂದಿಗೆ ನನ್ನಿಂದ ದೂರ ಹೋದಳು.


೨೫ 



ನನ್ನ ಈ ೨೫ ವರುಷದಲ್ಲಿ ಹದಿಯರೆಯದಲ್ಲಿ ವಸುಂದರ ಹಚ್ಚಿದ ಪ್ರೇಮಜ್ಯೋತಿ ಜೀವನವನ್ನೇ ಸುಟ್ಟು ಹಾಕಿತ್ತುನಾನು ಯಾವ ಹೆಜ್ಜೆ ಇಟ್ಟರು ಅದು ಅಲ್ಲಿ ತನ್ನ ಅಸ್ತಿತ್ವ ತೋರಿಸುತಿತ್ತುಇಬ್ಬರ ಮನೆಯವರನ್ನೂ ಅವರ ಜೀವನವನ್ನೂ ಅದು ಬಲಿ ತೆಗೆದುಕ್ಕೊಂಡಿತ್ತು,ನನ್ನಿಬ್ಬರ ಆ ಹುಚ್ಚು ಕೋತಿ ಮನಸ್ಸಿನ ಹದಿಹರೆಯ ಇಡಿ ಜೀವನ ಸುಡುವ ಕಿಚ್ಚಾಯಿತು ಸ್ವರ್ಣಲತಾ ನನ್ನನ್ನು ಬಿಟ್ಟು ಹೋದ ಬಳಿಕ ಪ್ರೀತಿ-ಪ್ರೇಮದಲ್ಲಿ ನಂಬಿಕೆ ಹೊರಟು ಹೋಯಿತು. ಜೀವನ ಬೇರೆಯವರ ಸೇವೆಗೆ ಮೀಸಲಿಟ್ಟೆಬೇರೆಯವರ ನಗುವಲ್ಲಿ ನನ್ನ ನಗುವನ್ನುಕಾಣಲು ಆರಂಭಿಸಿದೆ.ಹೋಟೆಲ್ ನಲ್ಲಿ ಮಾಣಿಯಾಗಿ ದುಡಿಯುವುದನ್ನು ಬಿಟ್ಟೆನನ್ನದೇ ಆದ ಅನ್ನಪೂರ್ಣ ಕೆಟೆರರ್ಸ್ ಶುರು ಮಾಡಿಕ್ಕೊಂಡೆ.


ಮದುವೆ ಮುಂಜಿಯಲ್ಲಿ ಬರುತ್ತಿದ್ದ ಲಾಭವನ್ನು ಮುಂಬೈನ ಅದೆಷ್ಟೋ ಹಸಿದ ಅನಾಥ ಹೊಟ್ಟೆ ತುಂಬಿಸುವಲ್ಲಿ ವಿನಿಯೋಗಿಸಲುಆರಂಭಿಸಿದೆ. ನನ್ನ ಜೀವನದಲ್ಲಿ ಸಹಾಯಹಸ್ತದ ಸಾರ್ಥಕತೆ ನೋಡಲು ಆರಂಭಿಸಿದೆ.

ಪ್ರತಿ ಹೆಜ್ಜೆಯಲ್ಲೂ ಆ ಹದಿಹರೆಯದ ಹುಚ್ಚು ಪ್ರೀತಿ ನೆನಪಾಗುತಿತ್ತುಅಂದು ನಾವು ಆ ಹುಚ್ಚು ನಿರ್ಧಾರ ತೆಗೆಯದೆ ಇದ್ದರೆ ನಾನು - ವಸು ಸುಖ ಜೀವನ ನಡೆಸುತ್ತಿದ್ದೆವು ಎಂದು ಪ್ರತಿ ಕ್ಷಣ ಮನ ಕೊರಗುತ್ತಿತ್ತುಆ ಹುಚ್ಚು ಪ್ರೀತಿಯೇ ಸರ್ವಸ್ವ ಎಂಬ ವಾದ ಎಲ್ಲಾಸಂಭಂದವನ್ನು ಸುಟ್ಟು ಹಾಕಿತ್ತುನನ್ನವರು ಎನಿಸಿದವರು ನನ್ನಿಂದ ದೂರವಾದರು. ನಮ್ಮ ಜೀವನದ ಕನಸು ಕಾಣುವ ವಯಸ್ಸಲ್ಲಿ ಜೀವನವೇ ಇದು ಎಂದು ನಿರ್ಧಾರ ತೆಗೆದುಕ್ಕೊಂಡಿದ್ದೆವುಅದೇ ನಿರ್ಧಾರ ನಮ್ಮಿಬ್ಬರ ಜೀವನಕ್ಕೆ ಮುಳ್ಳಾಯಿತು. ಮನಸ್ಸು ಶರೀರ ಜವಾಬ್ಧಾರಿ ತೆಗೆದು ಕೊಳ್ಳುವಷ್ಟು ಪಕ್ವ ವಾಗಿರಲಿಲ್ಲ ಆ ವಯಸ್ಸಿನ್ನಲ್ಲಿ ಜವಾಬ್ಧಾರಿಯನ್ನು ವಿನಾಕಾರಣ ನಮ್ಮ ಮೈಮೇಲೆ ಎಳೆದು ಕೊಂಡಿದ್ದೆವು  ಆ ಭಾರ ಹೊರಲಾಗದೆ ಇಬ್ಬರೂ ಕುಸಿದು ಬಿದ್ದೆವು.

ಇಬ್ಬರ ನಡುವೆ ಏನಾದರು ವೈಮನಸ್ಯ ಬಂದಾಗ ಸಮಾಧಾನಿಸಲು ಮತ್ತು ಆ ವೈಮನಸ್ಯ ಬಗೆಹರಿಸಲು ಯಾರು ನಮ್ಮಿಬ್ಬರ ನಡುವೆ ಇರದೇ ಹೋದರುಗಾಳಿ ಬರುವ ದಿಕ್ಕಿಗೆ ಬಾಗುವ ಜ್ಯೋತಿಯಂತಹ  ಪುಟ್ಟ ಮನಸ್ಸುಬದುಕ ಪರೀಕ್ಷೆ ಎದುರಿಸಲಾಗದೆ ನಂದಿ ಹೋಯಿತುಹಿರಿಯರು ನಮ್ಮಿಬ್ಬರ ಪ್ರೀತಿಗೆ ಕಾವಲಿದ್ದರೆ ಆ ದೀಪವನ್ನು ನಂದದಂತೆ ನೋಡಿಕ್ಕೊಳ್ಳುತ್ತಿದ್ದರು. ನಂದುವ ದೀಪಕ್ಕೆ ಆಸರೆ ನೀಡುವ ದೂರವಾದ ಸಂಭಂದದ ಕೈಗಳು ಕೊನೆಗೂ ಬಾರದೆ ಹೋಯಿತು.ಮುಳುಗುವ ಜೀವನ ನೌಕೆ ಅದರಷ್ಟಕ್ಕೆ ಮುಳುಗಿತೇ ವಿನಃ ಮತ್ತೆ ಸುಳಿ ದಾಟಲು ಸಾಧ್ಯವಾಗಲಿಲ್ಲ.

ಜವಾಬ್ಧಾರಿ ಹೊರಬೇಕಾದ ಮಗನ ಬೇಜವಾಬ್ಧಾರಿ ನಿರ್ಧಾರಕ್ಕೆ ವಿನಾಕಾರಣ ಅಪ್ಪ ಅಮ್ಮ ನ ಜಗಳ ನಡೆದು ಹೋಯಿತುಪ್ರೀತಿಗೆ ಮನೆಯಜಮಾನ ಬಲಿಯಾದರೆ ಜವಾಬ್ಧಾರಿ ಹೊತ್ತ ಹೆತ್ತಮ್ಮ ಖೈದಿ ಯಾದಳುತಂಗಿ ತಮ್ಮಂದಿರ ಬಾಳು ಬೀದಿಗೆ ಬಂತು.

ಮಗಳ ನಿರ್ಧಾರದಿಂದ ಅಮ್ಮ ಹುಚ್ಚಿ ಆದರೆ ಅಪ್ಪ ತನ್ನ ದೇಹಕ್ಕೆ ತಾನೆ ಶಿಕ್ಷಿಸಿಕ್ಕೊಂಡಮಗಳಿಗಾಗಿ ಸಂಪಾದಿಸಿದ ಸರ್ವಸ್ವ ತಮ್ಮನ ಪಾಲಾಯಿತು. ಸುಖದ ಸುಪ್ಪತ್ತಿನಲ್ಲಿದ್ದ ಮಗಳು ಕಾಲ ಕೆಳಗಿನ ಕಸವಾದಳು.

ಸಹಾಯಕ್ಕೆ ಬಂದ ಯಶೋದಮ್ಮ ನಮ್ಮಿಬ್ಬರ ಹುಚ್ಚು ಪ್ರೀತಿಗೆ ವಿನಾಕಾರಣ ಮನಸ್ಸಿನ ಗೊಂದಲದ ಸುಳಿಯ ಮೀನಾದರು,ರಾಮರಾಯರು ಸಂಧರ್ಭ ಕೊಟ್ಟ ಶಿಕ್ಷೆಗೆ ಮಗನಂತಹ ನನ್ನ-ಅವರ  ಸಂಭಂದಕ್ಕೆ ತೆರೆ ಎಳೆಸಿಕ್ಕೊಂಡರು.

ನನ್ನನ್ನು ನಂಬಿ ಹೆಂಡತಿಯಾಗಿ ಬಂದ ಸ್ವರ್ಣಲತಾ ನನ್ನ ನಿಜ ಅಸ್ತಿತ್ವ ತಿಳಿದ ಬಳಿಕ ಶತ್ರುವಾಗಿ ನನ್ನಿಂದ ದೂರವಾದಳು.

ಒಂದು ಪುಟ್ಟ ಜ್ಯೋತಿ ಇಬ್ಬರ ಜೀವನವನ್ನೇ ಸುಟ್ಟು ಬಿಟ್ಟ ಕಿಚ್ಚಾಯಿತು.

ನನ್ನ ಬಿಟ್ಟು ಹೋದ ವಸುಂದರ ತನ್ನ ಓದನ್ನು ಮುಂದುವರಿಸಿದಳುಬೆಳಗ್ಗಿನ ಹೊತ್ತಲ್ಲಿ ಕೆಲಸಕ್ಕೆ ಹೋಗಿ ಸಂಜೆ ತರಗತಿಯಲ್ಲಿ ಕಾಲೇಜ್ ಮುಗಿಸಿದಳು, IAS  ಅನ್ನು ಪಾಸ್ ಮಾಡಿದಳುತನ್ನ ಬಾಲ್ಯದ ಕನಸನ್ನು ನನಸು ಮಾಡಿದಳು.


೨೬ 



ಇಬ್ಬರೂ  ಜೊತೆಯಾಗಿ ಬೇರೆಯಾಗಿ ಕಳೆದ ಆ ೨೫ ವರ್ಷಗಳು ಹಾಗೆಯೇ ತೆಲಿಹೊದಂತೆ ಆಯಿತುಈಗ ಒಬ್ಬರು ಇನ್ನೊಬ್ಬರಿಗೆ ಅಪರಿಚಿತರಾಗಿ ನಿಂತಿದ್ದೆವು. ನಡುವಿನಲ್ಲಿ ಪ್ರೇಮಿ - ಪ್ರಿಯತಮೆಯ ಸಂಭಂದವಿರಲಿಲ್ಲ,ಆ ಸಂಭಂದ ಈ ೨೫ ವರ್ಷದಲ್ಲಿ ಕೊನೆಯಾಗಿತ್ತು. ಮನಸ್ಸಲ್ಲಿರುವ ವಸುಂದರನ ಪ್ರೀತಿಯು ಮನಸ್ಸಲ್ಲಿದ್ದರೆಯೇ ಸೂಕ್ತವ್ಯಕ್ತ ಪಡಿಸಿದರೆ ಎಲ್ಲಿ ಪುನಃ ಅದು ಆಹುತಿತೆಗೆದು ಕೊಂಡಿತೋ ಎಂಬ ಭಯವಿತ್ತು ಮನದಲ್ಲಿ.

ಅವಳೂ ನನ್ನನ್ನು ಅವಳ ಮನಸ್ಸಿನಲ್ಲಿಡಲು ಬಯಸಿದ್ದಳುಅವಳಲ್ಲಿಯೂ ನನ್ನದೇ ಭಯ ಮನೆಮಾಡಿತ್ತು. ಇಬ್ಬರಿಗೂ ಒಬ್ಬರೊಬ್ಬರ ಭೂತದ ೨೫ ವರ್ಷದ ಬಗ್ಗೆ ಮಾತಾಡಲು ಮನಸಿರಲಿಲ್ಲ,ಇಬ್ಬರೂ ವರ್ತಮಾನನದ ಜೀವನದಲ್ಲಿ ಸುಖ ಕಾಣುತ್ತಿದ್ದೆವುಇಬ್ಬರಲ್ಲೂ ಎಲ್ಲಿ ಭೂತದ ಬೂತ ಭವಿಷ್ಯದ ಭವಿಷ್ಯವನ್ನು ನುಂಗಿ ಹಾಕೀತೋ ಎಂಬ ಪ್ರಶ್ನೆ ಪೀಡಿಸುತ್ತಿತ್ತು.

ನಾನು ಹೋಗಿರುವ ಕೆಲಸ ಅಂದರೆ ಹಣ ಪಾವತಿ ಬಗ್ಗೆ ಕೇಳುವ ಮೊದಲೇ ಅವಳೂ ಚೆಕ್ ಹರಿದು ನನ್ನ ಕೈಯಲ್ಲಿಟ್ಟಳು. ನಾನು ಧನ್ಯವಾದ ಒಪ್ಪಿಸಲು ಅವಳ ಆ ಕೋಣೆಯಲ್ಲಿ ನೇತು ಹಾಕಿದ್ದ ಯಶೋದಮ್ಮನ ನಗು ಮತ್ತೆ ಶೋಭಿಸಿತು.

ಚೆಕ್ ನಲ್ಲಿ ಆವಳು ವಸುಂದರ ರಾಜಾರಾಂ ಎಂದು ಸಹಿ ಹಾಕಿದ್ದಳು.


ಆವಳು ಮದುವೆ ಆಗಿದ್ದಾಳೆ ಅಂದುಕೊಂಡಿರಾ ..ಇಲ್ಲ ರಾಜಾರಾಂ ಎಂದರೆ ಅವಳ ತಂದೆಯ ಹೆಸರು.ಸಂಭಂದ ಕಳಚಿದ ಆತಂದೆಯನ್ನು ತನ್ನ ಹೆಸರಲ್ಲಿ ಜೋಡಿಸಿದ್ದಳು ಆ ಮಹಾನಾಯಕಿ. ಸಂಭಂದ ಬೆಸೆಯಲು ಬಂದ ಹೆಸರಿಗೆ ಹೆಸರಾಗ ಬೇಕಿದ್ದ ಜನಾರ್ಧನ್ ಯಾರಲ್ಲೂ ಜೋಡಿ ಯಾಗದೆ ಹೋದ.

ಚೆಕ್ ನೊಂದಿಗೆ ಹೊರಬರಲು ೮೦ ರ ಆ ಫಿಯೆಟ್ ೨೫ ವರ್ಷದ ಕೊಳೆ ತೊಳೆದು ಶುಭ್ರವಾಗಿ ನಿಂತಿತ್ತು. ಅರುವತ್ತರ ಆ ವ್ಯಕ್ತಿಯ ಮುಖದಲ್ಲಿ ಏನನ್ನೋ ಸಾಧಿಸಿದ ಕಳೆ ಕಾಣುತಿತ್ತು.


**************************************    
ಮುಕ್ತಾಯ *********************************************************


ನಿಮ್ಮ 
ಕಾಮತ್ ಕುಂಬ್ಳೆ 

Saturday, August 13, 2011

ಕಿಚ್ಚು :: ಹೊತ್ತಿ ಉರಿಯುವ ಮುನ್ನ ... (ಭಾಗ -೯)



೨೧


ಇಲ್ಲಿಯೂ ಅದೃಷ್ಟ ನನ್ನ ಪ್ರೇಮಗೀತೆಯನ್ನು ಜಾಡಿಸಿ ಒದ್ದಿತ್ತು, ಹತ್ತಿದ ಲೋರಿಯು ರಾಜಸ್ತಾನದಿಂದ ಗ್ರಾನೈಟ್ ಅನ್ನು ಕೊಚ್ಚಿನ್ ಗೆ ಒಯ್ಯುತಿತ್ತು. ಲಾರಿ ಒಳಗಿದ್ದ ಡ್ರೈವರ್ ಆಗಲೇ ಕುಡಿದ ಯಾವುದೊ ಲೋಕಲ್ ಮಾಲಿನ ವಾಸನೆಯಿಂದ ನಾರುತ್ತಿದ್ದ. ಕ್ಲೀನರ್ ನಿದ್ದೆಗೆ ಜಾರಿದ್ದ. ನಾನು ಪ್ರಾಣ ಕೈಯಲ್ಲಿ ಹಿಡಿದು ಕಣ್ಣು ಬಿಟ್ಟೆ ವಸುಂದರನ ಕನಸು ಕಾಣುತ್ತಿದ್ದೆ, ಅರ್ದ ಗಂಟೆಯಲ್ಲೇ ಲಾರಿ ರೋಡಿನಿಂದ ಜಾರಿ ಪಕ್ಕದ ದೊಡ್ಡದೊಂದು ಆಲದಮರಕ್ಕೆ ಡಿಕ್ಕಿ ಹೊಡೆಯಿತು.
 
ಕಣ್ಣು ಬಿಟ್ಟು ನೋಡಿದಾಗ ಆರೈಕೆ ಮಾಡುವ ದಾದಿಯರು ಮತ್ತು ನೇತು ಹಾಕಿರುವ ನನ್ನ ಬಲಗಾಲ ದರ್ಶನವಾಯಿತು,ಲಾರಿ ಹೊಡೆದ ರಬಸಕ್ಕೆ ನನ್ನ ಬೋಧ ಹೊರಟು ಹೋಗಿತ್ತೇ ವಿನಹ ನನ್ನ ಪ್ರಾಣ ಹೊರಟು ಹೋಗಿರಲಿಲ್ಲ. ಆಕ್ಸಿಡೆಂಟ್ ಆಗಿ ಆಗಲೇ ೨೬ ಗಂಟೆ ಕಳೆದಿತ್ತು ,ಯಾರೋ ನನ್ನ ಕಿಸೆಯಲ್ಲಿನ ನಮ್ಮ  ಹೋಟೆಲ್ ನ ಬಿಲ್ ನೋಡಿ ರಾಮರಾಯರಿಗೆ ವಿಷಯ ತಿಳಿಸಿದ್ದರು. ಅವರು ಮುಂಬೈನ ಹೋಟೆಲ್ ನಲ್ಲಿನ ಅಕೌಂಟೆಂಟ್ ಬಳಿಯಲ್ಲಿ ಹೇಳಿ ನನ್ನ ಆರೈಕೆಯ ಎಲ್ಲಾ ವ್ಯವಸ್ತೆಮಾಡಿಸಿದ್ದರು, ಆದರೆ ನಾನು ನಡೆಯುವಂತಿರಲಿಲ್ಲ, ದಾದಿಯಲ್ಲಿ ಕೇಳುವಾಗ ಅವರು ಕನಿಷ್ಠ ೩ ತಿಂಗಳು ನಡೆಯಬಾರದು ಎಂದು ನಿರ್ಭಂದ ಬೇರೆ ಹಾಕಿದರು. ಇನ್ನು ಮಂಗಳೂರು ಸೇರುವುದು ಬರಿಯ ಕನಸಾಗಿಯೇ ಉಳಿಯಿತು.
 
೩ ತಿಂಗಳ ಎಲ್ಲ ಖರ್ಚನ್ನು ರಾಯರು ನೋಡಿಕ್ಕೊಂಡಿದ್ದರು ಜೊತೆಗೆ ನನ್ನ ಖರ್ಚಿಗಾಗಿ ಬೇರೆ ೧೦೦೦ ಸಾವಿರ ರುಪಾಯಿ ಕೂಡ ಕಳುಹಿಸಿದ್ದರು.ಗಡ್ಡದರಿಸಿ ಆಗಲೇ ಸನ್ಯಾಸಿ ಆಗಿ ಹೋಗಿದ್ದೆ. ಆಸ್ಪತ್ರೆಯಿಂದ ಸೀದಾ ಇನ್ನೊಂದು ಲಾರಿ ಹತ್ತಿ ಮಂಗಳೂರು ತಲುಪಿದೆ.ಈಗ ಊರ ಬಸ್ಸಲ್ಲಿ ಯಾರು ನನ್ನನ್ನು ಗುರುತಿಸಲಾರರಾದರು, ನನಗೆ ಹೆಚ್ಚಿನವರು ಪರಿಚಯದವರೇ ಆದರೆ ನಾನಾಗಿ ಯಾರಲ್ಲಿಯೂ ಮಾತನಾಡಲು ಹೋಗಲಿಲ್ಲ. ಬಸ್ಸಿಂದ ಇಳಿದು ಯಶೋದಮ್ಮನ ಮನೇನೂ ಸೇರಿದ್ದಾಯಿತು.

 
ಒಂದು ವರುಷದಲ್ಲಿ ಅಮೂಲಾಗ್ರ ಬದಲಾವಣೆಯಾಗಿತ್ತು ಆ ಮನೆಯಲ್ಲಿ, ಹೊರಗಿನ ಬೀಗ ಜಡಿದಿತ್ತು. ಬೀಗ ನೋಡಿ ಮನೆಯಲ್ಲಿ ಯಾರು ವಾಸವಿಲ್ಲದ ಕುರುಹು ಸಿಕ್ಕಿತು,ಆದರೆ ಗುಡಿಸಿದ ಅಂಗಳದಿಂದ ಇಲ್ಲಿ ಮನೆ - ತೋಟ ನೋಡಲು ಯಾರೋ ಇದ್ದಾರೆ ಎಂಬುವುದು ಖಾತ್ರಿಯಾಯಿತು, ಯಾರಿರಬಹುದು ಎಂದು ನಾನು ಹಿತ್ತಲು ಸುತ್ತ ತೊಡಗಿದೆ.ಯಶೋದಮ್ಮ ನಮಗಾಗಿ ಕೊಟ್ಟ ಪುಟ್ಟ ಪಂಪ್ ರೂಂ ಬಳಿಗೆ ಬಂದೆ, ಅರ್ದ ತೆರೆದಿರುವ ಬಾಗಿಲು ಮತ್ತು ಒಳಗಿನಿಂದ ಒಲೆಯಲ್ಲಿ ಹಚ್ಚಿರುವ ಒಗ್ಗರಣೆಯ ಪರಿಮಳ ನನ್ನನ್ನು ಅತ್ತ ಸೆಳೆಯಿತು.
 
ನನ್ನ ವಸುಂದರ ಅಲ್ಲಿ ಇದ್ದಾಳಾ? ಎಂಬ ಪ್ರಶ್ನೆ ಕಾಡ ತೊಡಗಿತು , ಮೇಲಾನೆ ಆ ಬಾಗಿಲನ್ನು ಸರಿಸಿದೆ.
ಅಲ್ಲ , ವಸುಂದರಳಾಗಿರಲಿಲ್ಲ, ೧೬-೧೮ ವರುಷದ ಯಾವುದೊ ಒಬ್ಬ ತರುಣ ಆ ಕೋಣೆಯಲ್ಲಿ ವಾಸಿಸುತ್ತಿದ್ದ.
ಅವನಲ್ಲಿ ನಾನು "ಯಾರು ನೀನು ? ಯಶೋದಮ್ಮ ಎಲ್ಲಿ ?" ಎಂದು ಕೇಳಿದೆ .
ಅವನು "ರಾಮು ಅಂತ, ಕಳೆದ ೬ ತಿಂಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಯಜಮಾನ್ರು ಮತ್ತು ಯಶೋದಮ್ಮ ಈಗ ಮಗನ್ನೊಂದಿಗೆ ಫೋರಿನ್ ಹೋಗಿದ್ದಾರೆ ...ನೀವ್ಯಾರು ?" ಅಂದ.
ನಾನು "ವಸುಂದರ ..?"
ಅವನು ವಸುಂದರ ಎಂದು ಕೇಳುತ್ತಲೇ "ಜನಾರ್ಧನ್ ಅವರಾ ? ವಸುಂದರಮ್ಮನೋರ ಯಜಮಾನ್ರು ?"ಅಂದ
ನಾನು ಕತ್ತು ಅಲ್ಲಾಡಿಸುತ್ತ "ಹುಂ ವಸುಂದರ ಎಲ್ಲಿ ?"ಅವನು "ಎಲ್ಲಿದ್ದಳೋ ಗೊತ್ತಿಲ್ಲ, ಎಲ್ಲ ಮುಗಿದ ನಂತರ ಬಂದಿದ್ದಿರಾ..."
ನಾನು"ಎಲ್ಲಾ ಮುಗಿದ ನಂತರ ಅಂದರೆ ಏನು ರಾಮು ಸರಿಯಾಗಿ ಬಿಡಿಸಿ ಹೇಳು ..."
 
ಅವನು ಮುಂದುವರಿಸಿದ "ವಸುಂದರಮ್ಮ ನಿಮ್ಮನ್ನು ಜೀವಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತಿದ್ದಳು, ನೀವು ಉರ್ರಾಚೆ ಇದ್ದರೂ ನಿಮ್ಮನ್ನು ಅವಳ ಉಸಿರಲ್ಲಿ ಕಂಡುಕ್ಕೊಂಡಿದ್ದಳು, ನಿಮ್ಮ ಕುಡಿ ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ತಿಳಿದಾಕ್ಷಣ ಸಂಭ್ರಮಿಸಿದ್ದಳು, ವಿಷಯ ತಿಳಿದಾಕ್ಷಣ ಯಶೋದಮ್ಮ ನನ್ನನ್ನು ಮನೆಕೆಲಸಕ್ಕೆ ಇಟ್ಟುಕೊಂಡರು, ಯಶೋದಮ್ಮ ಮತ್ತು ಯಜಮಾನ್ರು ಅವಳನ್ನು ತಮ್ಮ ಹೆತ್ತ ಮಗಳಿಗಿಂತ ಹೆಚ್ಚು ಪ್ರಿತಿಸುತ್ತಿದ್ದರು, ಅವಳಿಗೆ ಯಾವುದೇ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದರು, ನಿಮ್ಮ ವಿರಹದ ವಿನಃ ಅವಳಿಗೂ ಯಾವುದರ ಕೊರತೆ ಇರಲಿಲ್ಲ .
 
ಪ್ರತಿ ಸೋಮವಾರದಂದು ನಿಮಗಾಗಿ ಪತ್ರ ಬರೆಯುತ್ತಿದ್ದರು, ನಿಮ್ಮ ಪ್ರತಿ ಪತ್ರಕ್ಕೆ ಕಾಯುತ್ತಿದ್ದಳು, ನಿಮ್ಮ ಪತ್ರ ಬಂದ ದಿನ ಅದನ್ನು ನೂರು ಬಾರಿ ಓದುತ್ತಿದ್ದಳು, ನಮ್ಮೆಲ್ಲರಿಗೂ ಓದಿ ಹೇಳುತ್ತಿದ್ದಳು , ನೀವು ಸೀರೆ ಕಳುಹಿಸಿದ ದಿನ ಅದನ್ನುಟ್ಟು ತುಂಬಾನೆ ಸಂಭ್ರಮಿಸಿದ್ದಳು, ಯಶೋದಮ್ಮನವರು ಅವಳ ಬಸರಿ ಬಯಕೆಗೆ ಎಲ್ಲಾ ವ್ಯವಸ್ತೆಯು ಮಾಡಿ ಆಗಿತ್ತು, ಆದರೆ ಎರಡು ದಿನ ಮೊದಲೇ ಆ ಸಂಭ್ರಮ ಮಾಸಿ ಹೋಯಿತು, ವಿಷಯ ತಿಳಿದ ವಸುಂದರಮ್ಮ ತುಂಬಾನೆ ದುಃಖಿಸಿದಳು.
 
ಆಸ್ಪತ್ರೆಯಿಂದ ಬಂದಾಗಿಂದ ವಸುಂದರಮ್ಮ  ತುಂಬಾನೆ ಖಿನ್ನಳಾಗಿದ್ದಳು, ಯಾವುದರಲ್ಲೂ ಆಸಕ್ತಿ ಇರಲಿಲ್ಲ, ನಿಮಗೆ ವಿಷಯದ ಕುರಿತು ಬರೆದ ಪತ್ರದ ಬಗ್ಗೆ ಯಶೋದಮ್ಮ ತಿಳಿಸಿದ ನಂತರ ನೀವು ಬಂದೆ ಬರುತ್ತೀರಾ ಅವಳ ಕಣ್ಣೀರಿಗೆ ಆಸರೆಯಾಗಿ ನಿಲ್ಲುತ್ತೀರಾ ಎಂದು ಕನಸು ಕಾಣುತ್ತಿದ್ದಳು.
 
ತಿಂಗಳಾಯಿತು ಆಗಲು ನೀವು ಬರಲೇ ಇಲ್ಲ ಅವಳ ಪ್ರೀತಿಯ ಘಾಡತೆ ನಿಮಗೆ ತಿಳಿಯದೆ ಹೋಯಿತು, ದಿನಗಳು ಉರುಳುತ್ತಲೇ ಅವಳ ಆಶಾಕಿರಣ ಮೇಲಾನೆ ತನ್ನ ಉಜ್ವಲತೆ ಕಮ್ಮಿಗೊಳಿಸಿತು, ಕೊನೆಗೆ ಒಂದು ದಿನ ಪತ್ರ ಬರೆದು ಯಾರಿಗೂ ಸಿಗದಂತೆ ಮಾಯವಾದಳು..."

"
ಪತ್ರ...?"
"
ಹುಂ ...ಮನೆಯಲ್ಲಿದೆ ಆ ಪತ್ರ ...ಬನ್ನಿ ಕೊಡುವೆ."
 



೨೨


ಯಶೋದಮ್ಮನ ಮನೆಯಲ್ಲಿ ಯಶೋದಮ್ಮ ವಸುಗೆ ಒಂದು ಕೋಣೆಯನ್ನು ಕೊಟ್ಟಿದ್ದರು , ಅದರಲ್ಲಿ ಪುಟ್ಟದೊಂದು ಮಂಚ, ಮಂಚದ ಮೂರು ಬದಿಯಲ್ಲಿ ಮುದ್ದು ಮುದ್ದು ಮಗುವಿನ ಫೋಟೋ, ಬಳಿಯಲ್ಲೇ ಒಂದು ಖಾಲಿ ಫ್ರೇಮ್ ಅದರ ಕೆಳಗೆ ಒಂದು ಕಪಾಟಿನಲ್ಲಿ ಜೋಡಿಸಿಟ್ಟ ವಸುಂದರನಿಗೆ ಯಶೋದಮ್ಮ ಕೊಡಿಸಿದ ಬಟ್ಟೆಗಳು,ಅವುಗಳ ಮೇಲೆ ಒಂದು ಪತ್ರ.
ತೆರೆದು ಅದ ಓದ ತೊಡಗಿದೆ


"ಅಪ್ಪಾಜಿ ಮತ್ತು ಅಮ್ಮನಲ್ಲಿ
 
ಯಾವುದೇ ಪರಿಚಯ , ಸಂಭಂದವಿಲ್ಲದ ಈ ಪರದೇಶಿಗೆ ನಿಮ್ಮ ಮಗಳಂತೆ ನೋಡಿಕೊಂದದಕ್ಕೆ ಮೊದಲಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.
 
ಹೆತ್ತ ತಂದೆತಾಯಿಯರಿಗೆ ಮಾಡಿದ ಮೋಸಕ್ಕೆ ನನಗೆ ತಕ್ಕುದಾದ ಶಿಕ್ಷೆಯಾಗಿದೆ, ಅವರನ್ನು ಬಿಟ್ಟು ನನ್ನ ಜೀವನದಲ್ಲಿ ಬಂದ ಹೊಸವ್ಯಕ್ತಿಯೇ ಸರ್ವಸ್ವ ಎಂದು ನನ್ನ ಸರ್ವಸ್ವ ಅವನಿಗೆ ಒಪ್ಪಿಸಿದೆ, ಮಾತು ಮಾತಿನಲ್ಲೇ ಮೋಡಿಮಾಡಿ, ಮದುವೆ ಎಂಬ ನಾಟಕ ಆಡಿ ನನಗೆ ಒಂದು ಉಡುಗೊರೆಯನ್ನು ನೀಡಿ, ದೂರದೂರಿನ ಕೆಲಸದ ನಾಟಕವಾಡಿ ನನ್ನಿಂದ ದೂರವಾದ. ಅವನ ಸುಳ್ಳು ಪ್ರೀತಿಯನ್ನು ನಾನು ನಿಜವಾದ ಪ್ರೀತಿ ಎಂದು ತಿಳಿದು ನಾನು ಬರೆದ ೨೬ ಪತ್ರದ ಬದಲಿಗೆ ಅವ ಬರೆದದ್ದು ಕೇವಲ ೫ , ಒಂದು ಸೀರೆಯನ್ನು ಕೊಡಿಸಿದ, ನಾನು ಅವನು ಪ್ರೀತಿಸುತ್ತಾನೆ ಎಂದು ನಂಬಿದ್ದೆ, ನನ್ನ ಕಂಬನಿಗೆ ಆಸರೆ ಆಗಿ ನಿಲ್ಲುತ್ತಾನೆ ಎಂದು ಕೊಂಡಿದ್ದೆ, ಆದರೆ ನಿಮ್ಮ ಹೊರತು ಯಾರು ನನ್ನ ಕಣ್ಣೇರು ಒರಸಲಿಲ್ಲ, ನಿಮ್ಮ ಈ ಋಣಕ್ಕೆ ನಾನು ಎಂದೆಂದಿಗೂ ಋಣಿ ಯಾಗಿರುವೆ.
 
ನಾನು ಮಾಡಿದ ಮೋಸಕ್ಕೆ ನನಗೆ ಮೋಸವೇ ಪ್ರತಿಫಲ ಸಿಕ್ಕಿದೆ, ಅದನ್ನು ನಾನು ಸ್ವೀಕರಿಸುತ್ತೇನೆ, ನಿಮಗೆ ಇನ್ನಷ್ಟು ತೊಂದರೆ ಕೊಡಲು ನಾನು ಬಯಸುವುದಿಲ್ಲ ಆದಕಾರಣ ನಿಮ್ಮನ್ನು ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದೇನೆ, ನಾನು ನನ್ನ ಸೂರನ್ನು ಹುಡುಕಿಕೊಳ್ಳುತ್ತೇನೆ, ನನ್ನ ಬಗ್ಗೆ ಚಿಂತಿಸಬೇಡಿ, ನನ್ನನ್ನು ಹುಡುಕುವ ಪ್ರಯತ್ನವನ್ನೂ ಮಾಡಬೇಡಿ.
 
ನಿಮ್ಮ ನೆನಪು ಹೊರತುಪಡಿಸಿ ಹಿಂದಿನ ಯಾವುದೇ ನೆನಪು ಸುಳಿಯದಂತೆ ನಾನು ನನ್ನನ್ನು ಸನ್ನದ್ಧ ಮಾಡಿಕೊಳ್ಳುವೆ,ಇಂದಿನಿಂದ ಹೊಸ ವಸುಂದರಳಾಗಿ ಹೊಸ ಜೀವನ ನಡೆಸುವೆ.
 
ಕೊನೆಯದಾಗಿ ಒಂದು ಸಹಾಯ ಬೇಡುವೆ, ಅದೇನೆಂದರೆ ಅರ್ಥವಿಲ್ಲದ ಮದುವೆ ಎಂಬ ನಾಟಕದ ಏಕೈಕ ಸಾಕ್ಷಿ ಆಗಿರುವ ಈ  ಹರಸಿನ ಕೊಂಬನ್ನು ಇಲ್ಲಿ ಬಿಟ್ಟು ಹೋಗಿರುತ್ತೇನೆ, ಒಂದು ವೇಳೆ ಆ ಮಹಾನುಭಾವ ನನ್ನರಸಿ ಬಂದರೆ ಅದನ್ನು ಅವನಿಗೆ ಹಿಂತಿರುಗಿಸಿ, ಅರ್ಥವಿಲ್ಲದ ಸಂಭಂದ ಮುಂದುವರಿಸುವಲ್ಲಿ ನನಗೆ ಯಾವುದೇ ವಿಶ್ವಾಸವಿಲ್ಲ.
 
ನಿಮ್ಮ ನೆನಪಿಗಾಗಿ ನಿಮ್ಮ ಫೋಟೋ ನಾನು ಒಯ್ಯುತ್ತಿದ್ದೇನೆ
 
ನಿಮ್ಮ
ಸಾಕು ಮಗಳು
 

 "




೨೩

 
ಪತ್ರ ಓದಿ ಮುಗಿಸುತ್ತಲೇ ಕಣ್ಣೆಲ್ಲ ಮಂಜಾದವು, ಯಾವ ಪ್ರೀತಿಯನ್ನು ಪಡೆಯಬೇಕೆಂದು ನಾನು ಸರ್ವಸ್ವವನ್ನು ತ್ಯಾಗ ಮಾಡಿದ್ದೇನೋ ಅದು ನನ್ನನ್ನು ಬಿಟ್ಟು ಆಗಲೇ ದೂರವಾಗಿತ್ತು, ಮನೆಯವರ ದ್ವೇಷ ಕಟ್ಟಿ ಕ್ಕೊಂಡಿದ್ದಕ್ಕೆ ತಕ್ಕ ಶಾಸ್ತಿಯಾಯಿತು.
 


ನಾನು ರಾಮುನಲ್ಲಿ "ನೀವು ಹುಡುಕುವ ಪ್ರಯತ್ನ ಮಾಡಲಿಲ್ಲವೇ ?"ಅವನು "ಹುಡುಕಿದೆವು ಅಣ್ಣ, ಆದರೆ ಎಲ್ಲೂ ಸಿಗಲಿಲ್ಲ, ಯಜಮಾನರಿಗೆ ಮತ್ತು ಅಮ್ಮನವರಿಗೆ ಇದೆ ಚಿಂತೆ ಆಗಿತ್ತು, ಹೀಗಿರಲು ರಾಹುಲ್ ಕಳೆದ ತಿಂಗಳು ಬಂದಾಗ ಇಲ್ಲಿದ್ದರೆ ಇವರು ತಲೆ ಕೆಡಿಸಿಕೊಳ್ಳುತ್ತಾರೆ ಎಂದು ತನ್ನೊಂದಿಗೆ ಅವರನ್ನು ಅಮೆರಿಕಕ್ಕೆ ಕರಕ್ಕೊಂಡು ಹೋದರು, ಮನೆಯ ಜವಾಬ್ದಾರಿ ನನ್ನ ಮೇಲೆ ಬಿಟ್ಟು ಹೋಗಿದ್ದಾರೆ. ವಸುಂದರಮ್ಮನಿಗೆ ಮುಂದೆ ಏನಾಯಿತು ಗೊತ್ತಿಲ್ಲ ..."ಅಂದ.
 

ವಸುಂದರ ಎಲ್ಲಿ ಹೋಗಿರಬಹುದು ? ತನ್ನವರನ್ನು ಬಿಟ್ಟು ಬಂದದ್ದಾಗಿದೆ, ಈ ಊರಲ್ಲಿ ಪರಿಚಯದವರ್ಯಾರು ಇಲ್ಲ, ಎಲ್ಲಿ ಹೋಗಿರಬಹುದು ಎಂಬ ಪ್ರಶ್ನೆ ಕಾಡಲಾರಂಭಿಸಿತು.ಹುಡುಗಿಯರ ಬಗ್ಗೆ ಹೇಳಲು ಸಾದ್ಯವಿಲ್ಲ ಪುನಃ ತನ್ನ ಹೆತ್ತವರ ಬಳಿಗೆ ಹೋಗಿರಬಹುದು ಎಂದುಕ್ಕೊಂಡೆ.
 
ಮಂಗಳೂರು ಬಸ್ ಹತ್ತಿ ಅವರ ಮನೆ ತಲುಪಿದೆ.ಇಲ್ಲಿಯೂ ಒಂದು ವರ್ಷದಲ್ಲಿ ತುಂಬಾನೆ ಬದಲಾವಣೆ ಬಂದಿತ್ತು. ಯಾರು ನನ್ನನ್ನು ಗುರುತು ಹಚ್ಚಲಿಲ್ಲ, ಅಲ್ಲಿಯವರೂ ನನಗೆ ಹೊಸ ಮುಖವಾಗಿತ್ತು, ಮನೆ ಪ್ರವೇಶಿಸಿದಾಗ ಕೆಲಸದವನು ಸ್ವಾಗತಿಸಿ ಹೊರಗಿನ ಮಂಚದ ಮೇಲೆ ನನ್ನನ್ನು ಕುಳ್ಳಿರಿಸಿ ಕುಡಿಯಲು ತಣ್ಣೀರು ತಂದು ಕೊಟ್ಟ. ಸುತ್ತಲೂ ಕಣ್ಣು ಹಾಯಿಸಿದಾಗ ಗೋಡೆಯಲ್ಲಿ ನೇತುಹಾಕಿದ ವಸುನ ತಂದೆಯ ಫೋಟೋ ಕಾಣಿಸಿತು.
 
ನಾನು ಆ ಆಳಿನಲ್ಲಿ"ರಾಯರು ..?" ಎಂದು ಕೇಳಿದಾಗ
ಅವನು "ವಸುಂದರಮ್ಮ ಹೋದ ಬಳಿಕ ರಾಯರು ಮತ್ತು ಅಮ್ಮನೋರು ತುಂಬಾನೆ ನೊಂದುಕ್ಕೊಂಡಿದ್ದರು, ಗಂಡೆದೆ ರಾಯರು ತನ್ನ ದುಃಖವನ್ನು ಅಡಗಿಸುವಲ್ಲಿ ಪ್ರಯತ್ನ ಪಡುತ್ತಿದ್ದರೆ ಅಮ್ಮನವರು ಅದೇ ಕೊರಗಿನಲ್ಲಿ ತನ್ನ ಮಾನಸಿಕ ಹಿಡಿತವನ್ನೇ ಕಳಕ್ಕೊಂಡರು, ೬ ತಿಂಗಳ ಹಿಂದೆ ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಲಾಗಿದೆ, ರಾಯರು ಇದನೆಲ್ಲ ಕಂಡು ಆತ್ಮಹತ್ಯೆಗೆ ಶರಣಾದರು,ಈಗ ಅವರ ವ್ಯಾಪಾರವನ್ನು ಅವರ ತಮ್ಮ ನೋಡಿಕ್ಕೊಳುತ್ತಿದ್ದಾರೆ..."
 
ನಾನು ಮದ್ಯದಲ್ಲಿ ತಡೆದು ನಿಲ್ಲಿಸಿ "ವಸುಂದರ ಎಲ್ಲಿದ್ದಾಳೆ ಈಗ ?"
ಅವನು "ಯಾವುದೊ ಹುಡುಗನೊಂದಿಗೆ ಮದುವೆ ಆಗಿದ್ದಾಳಂತೆ , ಎಲ್ಲಿದ್ದಳೋ ಗೊತ್ತಿಲ್ಲ, ಒಂದು ವರುಷದ ಮೇಲಾಯ್ತು ಅವಳ ಮುಖ ನೋಡಿ, ವಿಶಾಖ ಪಟ್ಟಣಂ ಗೆ ಹೋಗುವಾಗ ನನ್ನ ತಬ್ಬಿ ಅಲ್ಲಿಗೆ ಹೋಗುವುದಿಲ್ಲ ಎಂದು ಅತ್ತಿದ್ದಳು. ಆ ಬಳಿಕ ನಾನು ನೋಡಲಿಲ್ಲ , ಒಂದು ವರುಷದ ಮಗುವಾಗಿನಿಂದ ನಾನು ಅವಳನ್ನು ನೋಡಿದ್ದೇನೆ ಅವಳು ಮೊದಲಬಾರಿಗೆ ಕಣ್ಣೀರು ಇಟ್ಟ ದಿನವಾಗಿತ್ತು ಅದು, ನನ್ನ ಮಗಳಂತೆ ಇತ್ತು ಆ ಮಗು, ಹೋದದ್ದೇ ಹೋದದ್ದು ಈ ಮನೆಯ ಎಲ್ಲಾ ಉತ್ಸಾಹ ನಿಂತು ಹೋಯಿತು." ಎನ್ನುತ್ತಾ ತನ್ನ ನೆರಿಗೆಯಲ್ಲಿ ಜಾರುತ್ತಿರುವ ಕಣ್ಣೀರು ಒರಸುತ್ತಾ "ನೀವ್ಯಾರು ? "ಅಂದ.
 
ನಾನು ನಿಜ ವಿಚಾರ ಹೇಳುವುದು ಬೇಡ ಎಂದು "ರಾಯರ ಒಬ್ಬ ಗೆಳೆಯನ ಮಗ, ಮಂಗಳೂರಿನಲ್ಲಿ ಕೆಲಸ ಇತ್ತು ಹಾಗೆ ಅವರನ್ನು ಭೇಟಿ ಮಾಡಿ ಹೋಗುವ ಎಂದು ಬಂದಿದ್ದೆ, ವಿಷಯ ತಿಳಿದು ಬೇಜಾರಾಯಿತು, ಮತ್ತೆ ಇನ್ನು ಯಾವಾಗಲಾದರು ಬರುವೆ" ಎನ್ನುತ್ತಾ ಆ ಶೋಕದಿಂದ ಹೊರ ಬಂದೆ. 


ಕೊನೆಯ ಭಾಗ . 

Friday, August 12, 2011

ಕಿಚ್ಚು :: ಭಾಗ ೮



೧೯

ಮನೆ ಬಿಟ್ಟು ೫  ತಿಂಗಳಾಯಿತು, ನನಗೆ ಬೆಂಗಳೂರಿನಲ್ಲಿ ಯಾವುದೇ ಹೆಚ್ಚಿನ ಖರ್ಚು ಇರಲಿಲ್ಲ  ೨೫೦ ರುಪಾಯೀ ನನ್ನ ಹೊರಗಿನ ಖರ್ಚಿಗೆ ಸಾಕಾಗುತ್ತಿತ್ತು, ಹೋಟೆಲ್ ಆದ ಕಾರಣ ಊಟ ವಸತಿ ಎಲ್ಲಾ ಪುಕ್ಕಟೆ ಯಾಗಿಯೇ ನಡೆದು ಹೋಗುತಿತ್ತು. ತಿಂಗಳ ಸಂಬಳ ಬಂದಂತೆ ವಸುಂದರನಿಗೆ ಕಳುಹಿಸುತಿದ್ದೆ. ಅವಳು ನನ್ನ ತಂಗಿ ತಮ್ಮಂದಿರ ಶಿಕ್ಷಣ ಮತ್ತು ಆರೈಕೆಯನ್ನು ಯಶೋದಮ್ಮನ ಸಹಾಯದಿಂದ ಮಾಡುತಿದ್ದಳು. ನನ್ನ ಪಾಲಿನ ೨೫೦ ರುಪಾಯೀಯಲ್ಲಿ ನನ್ನ ಖರ್ಚು ಬಿಟ್ಟು ೫ ತಿಂಗಳಲ್ಲಿ ನನ್ನಲ್ಲಿ ಉಳಿದ ೬೦೦ ರುಪಾಯೀಯ ಒಂದು ರೇಷ್ಮೆ ಸೀರೆಯನ್ನು ಅವಳಿಗಾಗಿ ನಾ ೨ ವಾರದ ಹಿಂದೆ ಕಳುಹಿಸಿಕೊಟ್ಟಿದ್ದೆ.
ಬರ ಬರುತ್ತಾ ಹೋಟೆಲ್ ನ ಯಜಮಾನರಾದ ರಾಮರಾಯರಿಗೆ ನಾನು ಹತ್ತಿರವಾಗುತ್ತಾ ಹೋದೆ, ನನ್ನಲ್ಲಿ ಅವರಿಗೂ ವಿಶ್ವಾಸವು ಹೆಚ್ಚುತ್ತಾ ಹೋಯಿತು, ಪರಿಣಾಮ ನನ್ನಲ್ಲಿ ಹೆಚ್ಚಿನ ಜವಾಬ್ಧಾರಿ ಹೇರಲು ಆರಂಭಿಸಿದರು.ಅವರು ನನ್ನನ್ನು ಕರೆದು ತನ್ನ ಮುಂಬೈಯಲ್ಲಿನ ಹೋಟೆಲ್ ನ  ಮೇಲ್ವಿಚಾರಣೆಯಲ್ಲಿ ಸಹಾಯ ಮಾಡುವಂತೆ ಕೇಳಿದರು, ನಾನು ಅದಕ್ಕೆ ಸಮ್ಮತ್ತಿಸಿದೆ. ಸಂಬಳವನ್ನು ೭೫೦ ರಿಂದ ಸೀದಾ ೧೦೦೦ ರುಪಾಯಿಗೆ ಏರಿಸುವ ಮಾತಾಯಿತು.

ಪ್ರತಿವಾರವೂ ಅವಳು ನನಗಾಗಿ ಪತ್ರ ಬರೆಯುತ್ತಿದ್ದಳು,ನಾನು ಕೆಲಸದ ಒತ್ತಡದಲ್ಲಿ ಕಾಗದ ಬರೆಯುವುದು ಕಮ್ಮಿಯಾಗುತ್ತ ಬಂತು, ಅವಳಿಗೆ ನನಗೆ ಮುಂಬೈನಲ್ಲಿ ಕೆಲಸ ಸಿಕ್ಕಿದ ವಿಚಾರ ಬರೆಯುವ ಎಂದು ಶುರು ಮಾಡುವಾಗಲೇ ಬಂದ ಪೋಸ್ಟ್ ಮಾನ್ ನನ್ನಲ್ಲಿ ಅವಳು ಬರೆದ ಕಾಗದ ಕೈಗಿಟ್ಟ.

"ಪ್ರಿಯ,
ನಿನ್ನ ಬಿಟ್ಟು ಬಾಳಲು ತುಂಬ ಹಿಂಸೆ ಅನಿಸುತ್ತಿದೆ, ಆದರೆ ಯಶೋದಮ್ಮ ಯಾವುದಕ್ಕೂ ತೊಂದರೆ ಇಲ್ಲದಂತೆ , ಅವರ ಹೆತ್ತ ಮಗಳಂತೆ ನನ್ನನ್ನು ನೋಡುತಿದ್ದಾರೆ,ನಿಮ್ಮ ಆಸೆಯಂತೆ ಪ್ರತಿ ಎರಡು ದಿನಕ್ಕೊಮ್ಮೆ ನಿಮ್ಮ ಮನೆಯವರ ಕುಶಲೋಪರಿ ತಿಳಿಯಲು ಧಾವಿಸುತ್ತಾರೆ, ತಂಗಿ -ತಮ್ಮಂದಿರೆಲ್ಲರೂ ಅಲ್ಲಿ ಕ್ಷೇಮವಾಗಿದ್ದರಂತೆ, ಅವರ ಚ್ಚುಚ್ಚುಮಾತು ನಾನು ಎಲ್ಲಿ ಕೆಳಬೇಕಾಗುತ್ತೋ ಅಂತ ಹೇಳಿ ನನ್ನನ್ನು ಇಲ್ಲಿವರೆಗೆ ಅವರು ನಿಮ್ಮ ಮನೆಗೆ ಕರಕ್ಕೊಂಡು ಹೋಗಿಲ್ಲ.
ನಿಮಗಾಗಿ ಒಂದು ಸಂತಸದ ಸುದ್ದಿ  ಇದೆ , ಅದೇನೆಂದರೆ ನಮ್ಮಿಬ್ಬರ ಪ್ರೇಮ ಕುಡಿಗೆ ಆಗಲೇ ೫ ತಿಂಗಳು ತುಂಬಿದೆ. ಆದರೆ ಈ ವಿಚಾರವನ್ನು ನೀವು ಊರಿಗೆ ಬಂದಾಗ ಹೇಳಿ ನಿಮಗೆ surprise ಕೊಡಲು ಬಯಸಿದ್ದೆ , ಕೆಲಸದ ಜವಾಬ್ಧಾರಿಯಲ್ಲಿ ನಿಮಗೆ ಊರಿಗೆ ಬರಲಾಗಲಿಲ್ಲ ಅನ್ನುವ ಮಾತಿಗೆ ನನಗೆ ತುಂಬಾ ದುಃಖವಿದೆ.
ಯಶೋದಮ್ಮನವರು ಪಂಡಿತರಲ್ಲಿ ವಿಚಾರಿಸಿ ಮುಂದಿನ ತಿಂಗಳ ೨೪ ನೇ ತಾರೀಖಿನಂದು ನನ್ನ ಸೀಮಂತ ಶಾಸ್ತ್ರ ಇಟ್ಟು ಕೊಂಡಿದ್ದಾರೆ, ಅದಕ್ಕೆ ತಪ್ಪದೆ ಬನ್ನಿ, ನಿಮಗಾಗಿ ನಾನು ಕಾಯುತ್ತಲಿರುವೆ, ನೀವು ಕಳುಹಿಸಿದ ಹಸಿರು ಸೀರೆ ಆ ಶಾಶ್ತ್ರಕ್ಕೆ ತಕ್ಕದಾದದ್ದು ಎಂದು ಯಶೋದಮ್ಮ ಅಂದಾಗ ನೀವು ನನ್ನಿಂದ ದೂರ ಇದ್ದರೂ ನನ್ನಲ್ಲಿ ಜೀವ ತಳೆದ ನಮ್ಮ ರಕ್ತ ಸಂಭಂದದ ಬಲ ಎಷ್ಟು ಗಾಡವಾಗಿರುವುದು ಎಂದು ಅರಿತುಕ್ಕೊಂಡೆ. ನಿಮ್ಮ ಯಜಮಾನರಲ್ಲಿ ೧ ವಾರದ ರಜೆ ಕೇಳಿಕ್ಕೊಂಡು ಬನ್ನಿ, ನಿಮ್ಮ ದಾರಿ ಕಾಣುತ್ತಾ ಇರುವ ನಿಮ್ಮ ವಸು " ಪತ್ರ ಓದುತ್ತಿದ್ದಂತೆ ವರ್ಣಿಸಲಾಗದಷ್ಟು ಖುಷಿ ಪಟ್ಟೆ.

ಎರಡೆರಡು ಸಿಹಿ ಸುದ್ದಿ ಒಮ್ಮೆಲೇ ಬಂದಿತ್ತು.ಮುಂದಿನ ತಿಂಗಳು ೨೪ ಅಂದರೆ ಇನ್ನೂ ೪೦ ದಿನವಿದೆ , ಆ ೨೪ಕ್ಕೆ ನಾನು ಊರಿಗೆ ಹೋಗಲು ನಿರ್ಧರಿಸಿದ, ನನ್ನ ಪ್ರತಿಪತ್ರದಲ್ಲಿ ಅವಳಿಗೆ ನನ್ನ ಕೆಲಸದಲ್ಲಿನ ಭಡ್ತಿ, ಮತ್ತು ಮುಂಬೈಗೆ ನನ್ನ ವರ್ಗದಬಗ್ಗೆ ಬರೆದೆ, ಮುಂಬೈನಿಂದಲೇ ನಾನು ಒಂದು ವಾರದ ರಜೆಯಲ್ಲಿ ಮನೆಗೆ ಬರುವೆ ಎಂದು ಬರೆದು ಕಾಗದ ಪೋಸ್ಟ್ ಮಾಡಿದೆ. ರಾಮರಾಯರಲ್ಲಿ ಈ ಕುರಿತು ಹೇಳಿದಾಗ ಅವರು ಒಂದುವಾರದ ರಜೆಗೆ ಒಪ್ಪಿಗೆ ಕೊಟ್ಟರು. ನಾನು ಮುಂದಿನ ೪೦ ದಿನ ಹೇಗೆಕಳೆಯಲಿ ಎಂಬ ಚಿಂತೆಯಲ್ಲೇ ನಿದ್ದೆಗೆ ಜಾರಿದೆ.


೨೦

ಮುಂಬೈ, ಕನಸಿನ ನಗರಿ, ಎಲ್ಲವನ್ನು ಮರೆಯುವಂತೆ ಮಾಡಿತು. ಕಣ್ಣು ಹಾಯಿಸಿದಷ್ಟು ದೂರ ಹಳದಿ ತಲೆಯ ಕಾರುಗಳ ಸಾಲು ಸಾಲು ,ರಸ್ತೆಯ ಇಕ್ಕೆಲಗಳಲ್ಲಿ ಗಗನಚುಂಬಿ ಕಟ್ಟಡಗಳ ಸಾಲು,ಪ್ರತಿ ೫,೧೦ ನಿಮಿಷಕ್ಕೆ ಬರುವ ಮುಂಬೈನ ನಾಡಿ ಲೋಕಲ್, ತುಂಬಿ ತುಳುಕುತ್ತಿರುವ BEST ಬಸ್ ಗಳು, ಭಾರತದ ಎಲ್ಲ ಭಾಷೆಗಳ ಜನರು ಸಿಗುವತಾಣ ನನ್ನನ್ನು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ವಾತಾವರಣವನ್ನೇ ಮರೆಸುವಂತೆ ಮಾಡಿತು, ಜೊತೆಗೆ ಮುಂಬೈಗೆ ಬಂದ ಮೇಲೆ ಒಂದು ಚೂರು ಪುರೋಸೋತ್ತು ಸಿಗದಷ್ಟು ಜವಾಬ್ದಾರಿ.

ರಾಮರಾಯರು ಮುಂಬೈ ಹೋಟೆಲಿನ ಬಹುತೇಕ ಎಲ್ಲ ಜವಾಬ್ದಾರಿಯನ್ನು ನನ್ನ ಮೇಲೆ ವಹಿಸಿದ್ದರು,ಲೆಕ್ಕಪತ್ರ ಮೇಲ್ವಿಚಾರಣೆಗೆ ಒಬ್ಬ ಅಧಿಕಾರಿ ನೇಮಿಸಿದ್ದರು. ೧೫ ದಿನಗಳಿಗೊಮ್ಮೆ ಬಂದು ಆ ಲೆಕ್ಕಪತ್ರಗಳನ್ನು ನೋಡುತ್ತಿದ್ದರು.

ಇವತ್ತು ರಾಮರಯರನ್ನು ಕರೆತರಲು ನಾನೇ ರೈಲ್ವೆ ಸ್ಟೇಷನ್ ಗೆ ಹೋಗಿದ್ದೆ, ಅವರಲ್ಲಿ ನಾನು ಊರಿಗೆ ಹೋಗುವ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದೆ, ಆಗ ಅವರು ಮುಂದಿನ ೨೫ ನೇ ತಾರೀಖಿನಂದು ಮುಂಬೈನಲ್ಲಿ ಇನ್ನೊಂದು ಹೋಟೆಲ್ ಅನ್ನು ಖರೀದಿಸುತ್ತಿದ್ದೇನೆ ಆದಕಾರಣ ನೀನು ಊರಿಗೆ ಹೋದರೆ ತುಂಬಾ ತೊಂದರೆಯಾಗುತ್ತದೆ, ಆ ಕೆಲಸ ಮುಗಿದಮೇಲೆ ನೀನು ಆರಾಮಾಗಿ ಒಂದು ತಿಂಗಳಮಟ್ಟಿಗೆ ಊರಿಗೆ ಹೋಗು ಎಂದರು.ಮೊದಲಿಗೆ ಬೇಜಾರಾಯಿತು, ನಂತರ ಆಲೋಚಿಸಿದಾಗ ಅವರಂದದ್ದು ಸರಿ ಎನಿಸಿತು, ಬಸರಿ ಬಯಕೆ ಹೆಂಗಸರ ಕೆಲಸ, ಅದಕ್ಕೆ ನನ್ನ ಗೈರು ಅಷ್ಟೇನೂ ದೊಡ್ದದೆನಿಸುವುದಿಲ್ಲ, ಅವಳ ಹೆರಿಗೆಯ ಸಮಯದಲ್ಲಿ ಅವಳೊಂದಿಗೆ ಇರುವುದು ಸೂಕ್ತವೆನಿಸಿತು.ಅವರಲ್ಲಿ ಅದಕ್ಕೂ ಒಪ್ಪಿಕ್ಕೊಂಡೆ.
ವಸುಂದರನಿಗೆ ಮುಂಬೈಗೆ  ಬಂದ ಬಳಿಕ ಪತ್ರ ಬರೆದಿರಲಿಲ್ಲ, ಈ ಕುರಿತು ನಾನು ಪತ್ರ ಬರೆದು ವಸುಂದರನಿಗೆ ಮುಂಬೈ ವಿಳಾಸನೂ ಪೋಸ್ಟ್ ಮಾಡಿದೆ.ಸಂಜೆ ರಾಯರು ಹಿಂತಿರುಗುವ ವೇಳೆಗೆ ನನ್ನನ್ನು ಕರೆದು ಅವರೊಂದಿಗೆ ಬೆಂಗಳೂರಿಗೆ ಬರುವಂತೆ ಹೇಳಿದರು, ಮುಂದಿನ ತಿಂಗಳು ಕೊಳ್ಳಲಿರುವ ಹೋಟೆಲ್ ನ ಮುಂಗಡ ಹಣದಲ್ಲಿ ಬಾಕಿ ಇರುವ ಹಣವನ್ನು ಬೆಂಗಳೂರಿನಿಂದ ನನ್ನ ಕೈಯಲ್ಲಿ ಕಳುಹಿಸಿ ಕೊಡುವ ಮಾತಾಡಿದರು, ನಾನು ಸರಿ ಎಂದು ಒಪ್ಪಿಕ್ಕೊಂಡೆ. ಅವರೊಂದಿಗೆ ನಾನು ಸಂಜೆ ಬೆಂಗಳೂರು ಟ್ರೈನ್ ಹತ್ತಿದೆ.

ಒಂದು ತಿಂಗಳ ನಂತರ ಬೆಂಗಳೂರಿನ ಆ ಹೋಟೆಲಿನ ನನ್ನ ಹಳೆ ಗೆಳೆಯರನ್ನೆಲ್ಲ ಭೇಟಿಯಾದೆ, ಆದರೆ ನನ್ನೊಂದಿಗೆ ಹೋಟೆಲ್ ಸರಿದ ಗಣೇಶ್ ಅಣ್ಣ ಕಾಣಲಿಲ್ಲ, ಅವನ ಜಾಗದಲ್ಲಿದ್ದ ಇನ್ನೊಬ್ಬ ಹೊಸ ಸೆಕ್ಯೂರಿಟಿ ಯವನಲ್ಲಿ ವಿಚಾರಿಸಿದಾಗ ಅವನು ರಜೆಯಲ್ಲಿರುವುದು ತಿಳಿಯಿತು, ಸಂಜೆ ನನ್ನ ಟ್ರೈನ್ ಇದ್ದಿದ್ದು ಸಂಜೆ ವರೆಗೆ ಮಾಡಲು ಬೇರೆ ಕೆಲಸವೂ ಇರಲಿಲ್ಲ ರಾಮರಾಯರು ನನ್ನನ್ನು ಸಂಜೆ ಮನೆಗೆ ಬಂದು ಹಣ ಪಡೆಯಲು ಹೇಳಿದ್ದರು ಅಲ್ಲಿವರೆಗೆ ನಾನು ಅಣ್ಣನ್ನೊಂದಿಗೆ ಇರಬಹುದು ಎಂದು ನಾನು ಅಣ್ಣನ ಮನೆಯೆಡೆಗೆ ಹೋದೆ.
ಗಣೇಶಣ್ಣನಿಗೆ ಸಲ್ಪ ಮಟ್ಟಿನ ಜ್ವರವಿತ್ತು, ಒಂದು ಮೂಲೆಯಲ್ಲಿ ಮಲಗಿದ್ದ ನನ್ನನ್ನು ನೋಡುತ್ತಿದ್ದಂತೆ ನನ್ನಲ್ಲಿ ನನ್ನ ಕುಶಲೋಪರಿ ಎಲ್ಲ ವಿಚಾರಿಸಿದ ಬಳಿಕ ನನ್ನಲ್ಲಿ "ಜನಾರ್ಧನ ಅಲ್ಲಿ ಬದಿಯ ಸೆಲ್ಫ್ ನಲ್ಲಿ ನಿನಗೆ ವಸು ಬರೆದಿರುವ ಮೂರು ಪತ್ರ ಇದೆ ನೋಡು ತೆಗೆದು ಕೋ ..."ಅಂದ.

ನಾನು ನನ್ನ ವಸುಗೆ ಪತ್ರ ಬರೆಯುದನ್ನು ಮರೆತರು ವಸು ಪ್ರತಿವಾರ ನನಗೆ ಪತ್ರ ಬರೆಯುತ್ತಿದ್ದಳು.ಒಂದೊಂದಾಗಿ ಪತ್ರ ಓದಲು ತೊಡಗಿದೆ, ಎಲ್ಲದರಲ್ಲೂ ಮುತ್ತಿನಂತಹ ಮಾತುಗಳಿದ್ದವು, ನನ್ನಲ್ಲಿ ಆಗಲೇ ಬಾಡಿದ್ದ ಪ್ರೀತಿ ಮತ್ತೆ ಚಿಗುರತೊಡಗಿತು. ಇನ್ನೇನು ನಾನು ಅವಳನ್ನು ನೋಡಲು ಹೋಗುತ್ತೇನೆ ಎಂದು ಖುಷಿ ಪಟ್ಟೆ.
ಅಣ್ಣನಿಗೆ ಗಂಜಿ ಮತ್ತು ಪಲ್ಯ ಮಾಡಿದೆ ಇಬ್ಬರು ಮಾತನಾಡುತ್ತಲೇ ಊಟ ಮಾಡುವಾಗ ಪೋಸ್ಟ್ ಮ್ಯಾನ್ ಇನ್ನೊಂದು ಪತ್ರದೊಂದಿಗೆ ಬಾಗಿಲು ಬಡಿಯುತಿದ್ದ. ಬಾಗಿಲು ತೆರೆದು ಪತ್ರ ಸ್ವೀಕರಿಸಿದೆ. ನನಗಾಗಿಯೇ ಬಂದಿದ್ದ ಪತ್ರವಾಗಿತ್ತು ಆದರೆ ಅದರಲ್ಲಿದ್ದ ಹಸ್ತಾಕ್ಷರ ನನ್ನ ವಸುದ್ದು ಆಗಿರಲಿಲ್ಲ, ಕುತೂಹಲದಿಂದಲೇ ಆ ಪತ್ರ ಓದಲು ತೊಡಗಿದೆ

"ಯಶೋಧ ಮಾಡುವ ನಮಸ್ಕಾರಗಳು, ವಸುಂದರನೊಂದಿಗೆ  ಒಂದು ಕೆಟ್ಟ ಘಟನೆ ನಡೆದು ಹೋಗಿದೆ, ಇದ್ದಕ್ಕಿದ್ದಂತೆ ನಿನ್ನೆ ವಸುವಿಗೆ ಹೊಟ್ಟೆ ನೋವು ಕಾಣಿಸಿತು,೭ ತಿಂಗಳಲ್ಲೇ ಇಂತಹ ನೋವು ಬರುವುದು ಸಾಮಾನ್ಯ ,ಸಾಮಾನ್ಯ ಬಸಿರು ನೋವು ಎಂದು ನಾವಂದುಕ್ಕೊಂಡಿದ್ದೆವು, ಅವಳೊಂದಿಗೆ ಅವಳನ್ನು ಕರಕ್ಕೊಂಡು ಡಾಕ್ಟರ್ ಬಳಿಗೆ ಹೋದಾಗ ಅವರು ವಸುಂದರನ ಶರೀರ ಪ್ರಸವ ಕ್ರಿಯೆಗೆ ಯೋಗ್ಯವಾಗಿ ಬೆಳೆದಿಲ್ಲ, ಆದಕಾರಣ ಹೊಟ್ಟೆಯಲ್ಲಿನ ಮಗುವಿನ ಉಸಿರಾಟದಲ್ಲಿ ತೊಂದರೆ ಉಂಟಾಗಿ ಮಗು ಸತ್ತು ಹೋಗಿದೆ, ಅಂದರು.

೨ ಘಂಟೆ ಒಳಗಾಗಿ ನಾನು ಆಸ್ಪತ್ರೆ ತಲುಪಿದರಿಂದ ಅವಳು ಸಾವಿನಿಂದ ಪಾರಾದಳು, ಇನ್ನೂ ಅವಳಿಗೆ ಬೋಧಬಂದಿಲ್ಲ. ನಿಮ್ಮ ವಿಳಾಸವನ್ನು ಅವಳ ಪುಸ್ತಕದಿಂದ ಪಡೆದು ನಿಮಗೆ ಪತ್ರ ಬರೆಯುತ್ತಿದ್ದೇನೆ, ನಿಮ್ಮ ತಮ್ಮ ಜನಾರ್ಧನನಿಗೆ ಬೇಗನೆ ಸುದ್ದಿ ತಿಳಿಸಿ ,ಅವನನ್ನು ಊರಿಗೆ ಬರುವಂತೆ ಹೇಳಿ, ವಸುಂದರ ಅವನ ದಾರಿಕಾಯುತ್ತಾ ಇದ್ದಾಳೆ. ಇಂತಿ ಯಶೋಧ "
ಪತ್ರ ಓದುತಿದ್ದಂತೆ ಕಣ್ಣು ಮಂಜಾಯಿತು , ಶರೀರ ಕಲ್ಲಾಯಿತು, ಬೆಂಗಳೂರಿನಿಂದ ಸೀದಾ ಮಂಗಳೂರಿಗೆ ಹೋಗುವ ಅಂದುಕ್ಕೊಂಡೆ, ಅಣ್ಣನ ಮನೆ ಬಿಟ್ಟು ಸೀದಾ ರಾಮರಾಯರ ಮನೆ ತಲುಪಿದೆ, ಅವರಲ್ಲಿ ನಾನು ಈ ವಿಚಾರ ಮಾತಾಡಿದೆ ಆಗ ಅವರು "ಜನಾರ್ಧನ ನೀನು ಮನೆಗೆ ಹೋಗುವುದು ಸೂಕ್ತ , ಆದರೆ ನನ್ನ ಕಷ್ಟ ಅರ್ಥಮಾಡಿಕೋ, ಬೇರೆ ಯಾರಲ್ಲಿ ನನಗೆ ನಂಬಿಕೆ ಇಲ್ಲ , ಒಂದೇ ಬಾರಿಗೆ ೧ ಲಕ್ಷ ರುಪಾಯೀ ಕಳುಹಿಸಿ ಕೊಡಲು, ನಾಳೆ ಒಳಗೆ ನಾನು ತಲುಪಿಸಬೇಕು ಇಲ್ಲಂತಾದರೆ ನನಗೆ ಕರಾರಿನಂತೆ ಶಿಕ್ಷೆ ಆದರೂ ಆಗಬಹುದು,ನೀನು ನಾಳೆ ಆ ಹಣ ಅಲ್ಲಿ ತಲುಪಿಸಿ ಅಲ್ಲಿಂದ ಮಂಗಳೂರು ಸೇರು, ಮನೆಯ ಎಲ್ಲ ಕಾರ್ಯ ಮುಗಿಸಿ ವಸುವನ್ನು ಕರಕ್ಕೊಂಡು ನೀನು ಆರಾಮಾಗಿ ಮುಂಬೈ ಸೇರು, ಎಷ್ಟು ದಿನ ತಡವಾದರೂ ಪರವಾಗಿಲ್ಲ, ನಾನೇನು ಅನ್ನುವುದಿಲ್ಲ, ಆದರೆ ನಾಳಿನ ಕೆಲಸ ಮಾತ್ರ ಇಲ್ಲ ಅನ್ನಬೇಡ" ರಾಯರು ನನ್ನನ್ನು ಮಾತಿನ ಚಕ್ರವ್ಯುಹಕ್ಕೆ ಸಿಲುಕಿಸಿದರು, ನನ್ನನ್ನು ಅವರುಮಾತಿಗೆ ಒಪ್ಪುವಂತೆ ಮಾಡಿದರು,ನಾನು ಸರಿ ಎಂದು ಮತ್ತೆ ಮುಂಬೈ ಟ್ರೈನ್ ಹಿಡಕ್ಕೊಂಡೆ.

ಕೈಯಲ್ಲಿ ೧ ಲಕ್ಷ ರುಪಾಯಿ , ತಲೆಯಲ್ಲಿ ವಸುಂದರಳಳಿಗೆ ನಡೆದ ಘಟನೆ ನಿದ್ದೆಯೇ ಹತ್ತದಂತೆ ಮಾಡಿತು, ಮಾರನೆದಿನ ಮದ್ಯಾನ್ನದ ಹೊತ್ತಿಗೆ ಮುಂಬೈ ತಲುಪಿದೆ, ಅಲ್ಲಿಂದ ಸೀದಾ ಹಣ ಒಪ್ಪಿಸಬೇಕಾದವರಿಗೆ ಒಪ್ಪಿಸಿದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಯಾವುದೇ ಟ್ರೈನ್ ಅಥವಾ ಬಸ್ಸ್ ಇಪ್ಪತ್ತೈದು ವರ್ಷಗಳ ಹಿಂದೆ ಇರಲಿಲ್ಲ, ತಡವಾಗಿ ಮನೆ ಸೇರಲು ಮನಸಿರಲಿಲ್ಲ ಅದರಿಂದ ನಾನು ಮುಂಬೈನ ಹೊರವಲಕ್ಕೆ ಬಂದು ಈ ಬದಿಗೆ ಬರುವ ಲಾರಿ ಹತ್ತಿಕ್ಕೊಂಡೆ.


ಮುಂದಿನ ಭಾಗ